ಶಬರಿಮಲೆ (ಕೇರಳ): ಭಗವಾನ್ ಅಯ್ಯಪ್ಪನಿಗೆ ಶುಕ್ರವಾರ ಮುಂಜಾನೆ ವಾರ್ಷಿಕ ಮಂಡಲ ಪೂಜೆ ನೆರವೇರಿದೆ. ಕೋವಿಡ್ ಪ್ರೊಟೋಕಾಲ್ಗೆ ಅನುಸಾರವಾಗಿ ಭಕ್ತರು ಇಂದು ಸ್ವಾಮಿ ದರ್ಶನ ಪಡೆದರು.
ಮಂಡಲ ಪೂಜೆಯು ಶಬರಿಮಲೆಯ ವಾರ್ಷಿಕ ಆಚರಣೆಯಾಗಿದ್ದು, ಅಯ್ಯಪ್ಪ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಪೂಜೆಯಲ್ಲಿ ಪಾಲ್ಗೊಳ್ಳುವುದು ವಾಡಿಕೆ.
ಇನ್ನು ಕೋವಿಡ್ಗೆ ಸಂಬಂಧಿಸಿದ ಎಲ್ಲಾ ಸೂಚನೆಗಳನ್ನು ದೇವಸ್ಥಾನದ ಆವರಣದೊಳಗೆ ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ. ಸಾಮಾಜಿಕ ಅಂತರವನ್ನು ಕಾಪಾಡುವುದು, ಹಾಗೂ ಮಾಸ್ಕ್ಗಳನ್ನು ಧರಿಸುವುದು ಪ್ರತಿಯೊಬ್ಬ ಭಕ್ತರಿಗೂ ಕಡ್ಡಾಯವಾಗಿದೆ. ಕೋವಿಡ್ ಕಾರಣದಿಂದಾಗಿ ಈ ವರ್ಷ ಭಕ್ತ ಸಂಖ್ಯೆಯಲ್ಲೂ ತೀರಾ ಇಳಿಮುಖವಾಗಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ದೇವಾಲಯದ ಆವರಣ ತೀರಾ ಖಾಲಿಯಾಗಿ ಕಾಣುತ್ತಿತ್ತು.
ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರಬೇಕು. ದಿನಕ್ಕೆ 250 ಜನರಿಗೆ ಮಾತ್ರ ದೇವರ ದರ್ಶನ (ಭೇಟಿ) ನೀಡಲು ಅವಕಾಶ ನೀಡಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚನೆ ನೀಡಿದ್ದಾರೆ.