ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿದ ನಂತರ ಪ್ರತಿಕ್ರಿಯಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಇಂತಹ ಇನ್ನೊಂದು ಘಟನೆ ನಡೆಯಲು ಅವಕಾಶ ನೀಡದಂತೆ ಶಪಥ ತೆಗೆದುಕೊಳ್ಳುವ ದಿನ ಇದಾಗಿದೆ ಎಂದು ಹೇಳಿದರು.
ಯಾವುದೇ ಮಗಳನ್ನು ಮತ್ತೊಬ್ಬ ನಿರ್ಭಯಾ ಆಗಲು ಬಿಡುವುದಿಲ್ಲ. ಪೊಲೀಸ್, ನ್ಯಾಯಾಲಯಗಳು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಎಲ್ಲರೂ ಒಟ್ಟಾಗಿ ವ್ಯವಸ್ಥೆಯ ಲೋಪದೋಷಗಳನ್ನು ತೆಗೆದುಹಾಕಲು ಪಣ ತೊಡಬೇಕಿದೆ ಎಂದರು.