ನವದೆಹಲಿ: ಭಾರತೀಯ ಪೌರತ್ವ ಹೊಸ ಕಾನೂನು ವಿರೋಧಿಸಿ ಕೇರಳ ಸರ್ಕಾರ, ಸುಪ್ರೀಂಕೋರ್ಟ್ ಮೆಟ್ಟಿಲು ಏರಿದೆ. ಕೇಂದ್ರ ಸರ್ಕಾರ ಇತ್ತೀಚಗೆ ಜಾರಿಗೆ ತಂದಿರುವ ಪೌರತ್ವ ಕಾಯಿದೆ ಸಂವಿಧಾನದ ಆಶಯಗಳಾದ ಆರ್ಟಿಕಲ್ 14, 21 ಮತ್ತು 25 ಗಳನ್ನ ಉಲ್ಲಂಘಿಸುತ್ತದೆ ಎಂದು ಕೇರಳ ಸರ್ಕಾರ ಹೇಳಿದೆ.
ಈ ಸಂಬಂಧ ಅದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ, ಹೊಸ ಕಾನೂನಿನ ಸಿಂಧುತ್ವವನ್ನ ಪ್ರಶ್ನಿಸಿದ್ದಾರೆ. ಈ ಅರ್ಜಿಯಲ್ಲಿ ಭಾರತೀಯ ಪೌರತ್ವ ಕಾಯಿದೆ ಆರ್ಟಿಕಲ್ 14, 21 ಹಾಗೂ 25 ಗಳನ್ನು ಉಲ್ಲಂಘಿಸುತ್ತದೆ ಎಂದು ದೂರಿದೆ.