ETV Bharat / bharat

ಹಂತಕ​ ವಿಕಾಸ್​ ದುಬೆಯ ಮತ್ತೋರ್ವ ಸಹಾಯಕನ ಬಂಧನ

author img

By

Published : Aug 17, 2020, 12:24 PM IST

ಉತ್ತರ ಪ್ರದೇಶವನ್ನೇ ಬೆಚ್ಚಿ ಬೀಳಿಸಿದ್ದ ಪೊಲೀಸ್​ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಹಾಗೂ ವಿಕಾಸ್​ ದುಬೆಯ ಆಪ್ತ ಸಹಾಯಕನಾಗಿದ್ದ ರಾಜೇಂದ್ರ ಮಿಶ್ರಾ ಎಂಬಾತನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

Another Vikas Dubey aide arrested
ಸಾಂದರ್ಭಿಕ ಚಿತ್ರ

ಕಾನ್ಪುರ(ಉತ್ತರ ಪ್ರದೇಶ): ಕುಖ್ಯಾತ ರೌಡಿಶೀಟರ್​ ವಿಕಾಸ್ ದುಬೆಯ ಮತ್ತೊಬ್ಬ ಸಹಾಯಕನಾಗಿದ್ದ ಹಾಗೂ ಹತ್ಯೆಗೀಡಾದ ಪ್ರಭಾತ್ ಮಿಶ್ರಾ ಅವರ ತಂದೆ ರಾಜೇಂದ್ರ ಮಿಶ್ರಾ ಎಂಬಾತನನ್ನು ಶಿವರಾಜ್‌ಪುರ ಪ್ರದೇಶದ ಕಾರ್ಖಾನೆಯೊಂದರ ಬಳಿ ಪೊಲೀಸರು ಬಂಧಿಸಿದ್ದಾರೆ.

ಜುಲೈ 3 ರಂದು ಬಿಕ್ರು ಪ್ರದೇಶದಲ್ಲಿ ನಡೆದ ಶೂಟೌಟ್‌ಗೆ ಎಂಟು ಮಂದಿ ಪೊಲೀಸರು ಬಲಿಯಾಗಿದ್ದು, ಈ ಕೇಸ್​ಗೆ ಸಂಬಂಧಿಸಿದಂತೆ ರಾಜೇಂದ್ರ ಮಿಶ್ರಾ ಮೇಲೆ 147, 148, 149, 302, 307, 394, 120 ಬಿ, 7 ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆ (ಸಿಎಲ್‌ಎ) ಮತ್ತು 3/25 ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್​​ ದಾಖಲಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಬ್ರಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.

ಜುಲೈ 3 ರ ಶೂಟೌಟ್​​ ಪ್ರಕರಣದ ನಂತರ ವಿಕಾಸ್​ ದುಬೆ ಬಂಧಿಸಲಾಗಿತ್ತು. ಆದರೆ ಬಳಿಕ ಪೊಲೀಸರ ಎನ್​​​​ಕೌಂಟರ್​​ಗೆ ಬಲಿಯಾಗಿದ್ದ. ದುಬೆ ಹತ್ಯೆ ಬಳಿಕ ರಾಜೇಂದ್ರ ಮಿಶ್ರಾ ತಲೆಮರೆಸಿಕೊಂಡಿದ್ದ. ನ್ಯಾಯಾಲಯಕ್ಕೆ ಶರಣಾಗುವ ಸಲುವಾಗಿ ಸಹಾಯ ಪಡೆಯಲು ಪರಿಚಯಸ್ಥರ ಮನೆಗೆ ತೆರಳುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಎಸ್​​​ಪಿ ಮಾಹಿತಿ ನೀಡಿದ್ದಾರೆ.

ಇನ್ನು ರಾಜೇಶ್​​ ಮಿಶ್ರಾನನ್ನು ಬಂಧಿಸಿ ವಿಚಾರಿಸಿದಾಗ, ಜುಲೈ 3 ರಂದು ನಡೆದ ಶೂಟೌಟ್​​ನಲ್ಲಿ ತಾನು ಮತ್ತು ಆತನ ಮಗ ಪ್ರಭಾತ್​​ ಮಿಶ್ರಾ ಪಿಸ್ತೂಲಿನಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಈ ಪ್ರಕರಣದಲ್ಲಿ ಹೆಸರಿಸಲ್ಪಟ್ಟಿದ್ದ ರಾಜೇಂದ್ರ ಮಿಶ್ರಾ ಪುತ್ರ ಪ್ರಭಾತ್​​ನನ್ನು ಶೂಟೌಟ್​​ ನಡೆದ ಒಂದು ವಾರದಲ್ಲಿ ಹರಿಯಾಣದ ಫರಿದಾಬಾದ್​​ನಲ್ಲಿ ಬಂಧಿಸಲಾಗಿತ್ತು ಹಾಗೂ ಈ ವೇಳೆ ಪರಾರಿಯಾಗಲು ಯತ್ನಿಸಿದಾಗ ಆತನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದರು.

ಕಾನ್ಪುರ(ಉತ್ತರ ಪ್ರದೇಶ): ಕುಖ್ಯಾತ ರೌಡಿಶೀಟರ್​ ವಿಕಾಸ್ ದುಬೆಯ ಮತ್ತೊಬ್ಬ ಸಹಾಯಕನಾಗಿದ್ದ ಹಾಗೂ ಹತ್ಯೆಗೀಡಾದ ಪ್ರಭಾತ್ ಮಿಶ್ರಾ ಅವರ ತಂದೆ ರಾಜೇಂದ್ರ ಮಿಶ್ರಾ ಎಂಬಾತನನ್ನು ಶಿವರಾಜ್‌ಪುರ ಪ್ರದೇಶದ ಕಾರ್ಖಾನೆಯೊಂದರ ಬಳಿ ಪೊಲೀಸರು ಬಂಧಿಸಿದ್ದಾರೆ.

ಜುಲೈ 3 ರಂದು ಬಿಕ್ರು ಪ್ರದೇಶದಲ್ಲಿ ನಡೆದ ಶೂಟೌಟ್‌ಗೆ ಎಂಟು ಮಂದಿ ಪೊಲೀಸರು ಬಲಿಯಾಗಿದ್ದು, ಈ ಕೇಸ್​ಗೆ ಸಂಬಂಧಿಸಿದಂತೆ ರಾಜೇಂದ್ರ ಮಿಶ್ರಾ ಮೇಲೆ 147, 148, 149, 302, 307, 394, 120 ಬಿ, 7 ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆ (ಸಿಎಲ್‌ಎ) ಮತ್ತು 3/25 ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್​​ ದಾಖಲಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಬ್ರಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.

ಜುಲೈ 3 ರ ಶೂಟೌಟ್​​ ಪ್ರಕರಣದ ನಂತರ ವಿಕಾಸ್​ ದುಬೆ ಬಂಧಿಸಲಾಗಿತ್ತು. ಆದರೆ ಬಳಿಕ ಪೊಲೀಸರ ಎನ್​​​​ಕೌಂಟರ್​​ಗೆ ಬಲಿಯಾಗಿದ್ದ. ದುಬೆ ಹತ್ಯೆ ಬಳಿಕ ರಾಜೇಂದ್ರ ಮಿಶ್ರಾ ತಲೆಮರೆಸಿಕೊಂಡಿದ್ದ. ನ್ಯಾಯಾಲಯಕ್ಕೆ ಶರಣಾಗುವ ಸಲುವಾಗಿ ಸಹಾಯ ಪಡೆಯಲು ಪರಿಚಯಸ್ಥರ ಮನೆಗೆ ತೆರಳುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಎಸ್​​​ಪಿ ಮಾಹಿತಿ ನೀಡಿದ್ದಾರೆ.

ಇನ್ನು ರಾಜೇಶ್​​ ಮಿಶ್ರಾನನ್ನು ಬಂಧಿಸಿ ವಿಚಾರಿಸಿದಾಗ, ಜುಲೈ 3 ರಂದು ನಡೆದ ಶೂಟೌಟ್​​ನಲ್ಲಿ ತಾನು ಮತ್ತು ಆತನ ಮಗ ಪ್ರಭಾತ್​​ ಮಿಶ್ರಾ ಪಿಸ್ತೂಲಿನಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಈ ಪ್ರಕರಣದಲ್ಲಿ ಹೆಸರಿಸಲ್ಪಟ್ಟಿದ್ದ ರಾಜೇಂದ್ರ ಮಿಶ್ರಾ ಪುತ್ರ ಪ್ರಭಾತ್​​ನನ್ನು ಶೂಟೌಟ್​​ ನಡೆದ ಒಂದು ವಾರದಲ್ಲಿ ಹರಿಯಾಣದ ಫರಿದಾಬಾದ್​​ನಲ್ಲಿ ಬಂಧಿಸಲಾಗಿತ್ತು ಹಾಗೂ ಈ ವೇಳೆ ಪರಾರಿಯಾಗಲು ಯತ್ನಿಸಿದಾಗ ಆತನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.