ETV Bharat / bharat

ಅಮರನಾಥ ಯಾತ್ರಿಕರು ತೆರಳುತ್ತಿದ್ದ ಬಸ್ ಭೀಕರ ಅಪಘಾತ.. 13 ಮಂದಿಗೆ ಗಾಯ.. ವಿಡಿಯೋ

author img

By

Published : Jul 14, 2022, 2:14 PM IST

Updated : Jul 14, 2022, 8:40 PM IST

ಜಮ್ಮು ಕಾಶ್ಮೀರದ ಖಾಜಿಗುಂಡ್​ನಲ್ಲಿ ಅಮರನಾಥ ಯಾತ್ರಿಕರು ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ.

ಅಮರನಾಥ ಯಾತ್ರಿಕರು ತೆರಳುತ್ತಿದ್ದ ಬಸ್ ಭೀಕರ ಅಪಘಾತ.. 13 ಮಂದಿಗೆ ಗಾಯ
ಅಮರನಾಥ ಯಾತ್ರಿಕರು ತೆರಳುತ್ತಿದ್ದ ಬಸ್ ಭೀಕರ ಅಪಘಾತ.. 13 ಮಂದಿಗೆ ಗಾಯ

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ಖಾಜಿಗುಂಡ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕನಿಷ್ಠ13 ಅಮರನಾಥ ಯಾತ್ರಿಗಳು ಗಾಯಗೊಂಡಿದ್ದಾರೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಬದ್ರಗುಂಡ್ ಕ್ರಾಸಿಂಗ್‌ನಲ್ಲಿ ಪ್ರಯಾಣಿಸುತ್ತಿದ್ದ ಬಸ್​ ಟಿಪ್ಪರ್​ಗೆ ಡಿಕ್ಕಿ ಹೊಡೆದಿದ್ದು, 13 ಯಾತ್ರಿಗಳು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಇಬ್ಬರನ್ನು ಹೊರತುಪಡಿಸಿ ಹೆಚ್ಚಿನ ಯಾತ್ರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಅನಂತನಾಗ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.

ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ನೆರವು ನೀಡುವಂತೆ ಆಡಳಿತ ಮಂಡಳಿಗೆ ನಿರ್ದೇಶನ ನೀಡಲಾಗಿದೆ. ಕಳೆದ ವಾರ ಅಮರನಾಥ ಗುಹೆಗೆ ಹೋಗುವ ಮಾರ್ಗದಲ್ಲಿ ಬಟ್ಲಾಲ್‌ನಲ್ಲಿ ಹಠಾತ್ ಪ್ರವಾಹದಲ್ಲಿ 16 ಯಾತ್ರಿಗಳು ಸಾವನ್ನಪ್ಪಿದ್ದರು.

ಅಮರನಾಥ ಯಾತ್ರಿಕರು ತೆರಳುತ್ತಿದ್ದ ಬಸ್ ಭೀಕರ ಅಪಘಾತ.. 13 ಮಂದಿಗೆ ಗಾಯ

ಬಾಲ್ಟಾಲ್ ಶ್ರೀನಗರದಿಂದ ಸುಮಾರು 80 ಕಿಮೀ ದೂರದಲ್ಲಿದೆ. ಜೂನ್ 30ರಂದು ಯಾತ್ರೆ ಆರಂಭವಾಗಿದ್ದು, 43 ದಿನಗಳ ಕಾಲ ನಡೆಯಲಿದೆ. ಕಳೆದ ಎರಡು ವರ್ಷಗಳಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ವಾರ್ಷಿಕ ತೀರ್ಥಯಾತ್ರೆಯನ್ನು ನಡೆಸಲಾಗಿರಲಿಲ್ಲ. ಈ ವರ್ಷ ದಾಖಲೆಯ ಎಂಟು ಲಕ್ಷ ಯಾತ್ರಿಗಳು ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ನಲ್ಲಿರುವ ಪಹಲ್ಗಾಮ್‌ನಿಂದ 45 ಕಿಮೀ ದೂರದಲ್ಲಿರುವ ಪವಿತ್ರ ಗುಹೆಗೆ ಪೂಜೆ ಸಲ್ಲಿಸಲು ಭಾರತದಾದ್ಯಂತ ಭಕ್ತರು ಬರುತ್ತಾರೆ. ಪಹಲ್ಗಾಮ್​​ನಿಂದ ಗುಹೆಯನ್ನು ತಲುಪಲು ಯಾತ್ರಿಗಳಿಗೆ ಕೆಲವು ದಿನಗಳ ಚಾರಣವನ್ನು ತೆಗೆದುಕೊಳ್ಳುತ್ತದೆ. ಅನೇಕ ಯಾತ್ರಿಕರು ಗುಹೆಯನ್ನು ಬೇಗ ತಲುಪಲು ಬಾಲ್ಟಾಲ್‌ನಿಂದ ಕಡಿಮೆ ಮತ್ತು ಕಡಿಮೆ ಪ್ರಯಾಸಕರ ಇರುವ ಮಾರ್ಗವನ್ನು ಹೆಚ್ಚು ಅವಲಂಬಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ನಡು ರಸ್ತೆಯಲ್ಲೇ ಕುಖ್ಯಾತ ರೌಡಿ ಹಂದಿ ಅಣ್ಣಿ ಬರ್ಬರ ಕೊಲೆ

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ಖಾಜಿಗುಂಡ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕನಿಷ್ಠ13 ಅಮರನಾಥ ಯಾತ್ರಿಗಳು ಗಾಯಗೊಂಡಿದ್ದಾರೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಬದ್ರಗುಂಡ್ ಕ್ರಾಸಿಂಗ್‌ನಲ್ಲಿ ಪ್ರಯಾಣಿಸುತ್ತಿದ್ದ ಬಸ್​ ಟಿಪ್ಪರ್​ಗೆ ಡಿಕ್ಕಿ ಹೊಡೆದಿದ್ದು, 13 ಯಾತ್ರಿಗಳು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಇಬ್ಬರನ್ನು ಹೊರತುಪಡಿಸಿ ಹೆಚ್ಚಿನ ಯಾತ್ರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಅನಂತನಾಗ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.

ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ನೆರವು ನೀಡುವಂತೆ ಆಡಳಿತ ಮಂಡಳಿಗೆ ನಿರ್ದೇಶನ ನೀಡಲಾಗಿದೆ. ಕಳೆದ ವಾರ ಅಮರನಾಥ ಗುಹೆಗೆ ಹೋಗುವ ಮಾರ್ಗದಲ್ಲಿ ಬಟ್ಲಾಲ್‌ನಲ್ಲಿ ಹಠಾತ್ ಪ್ರವಾಹದಲ್ಲಿ 16 ಯಾತ್ರಿಗಳು ಸಾವನ್ನಪ್ಪಿದ್ದರು.

ಅಮರನಾಥ ಯಾತ್ರಿಕರು ತೆರಳುತ್ತಿದ್ದ ಬಸ್ ಭೀಕರ ಅಪಘಾತ.. 13 ಮಂದಿಗೆ ಗಾಯ

ಬಾಲ್ಟಾಲ್ ಶ್ರೀನಗರದಿಂದ ಸುಮಾರು 80 ಕಿಮೀ ದೂರದಲ್ಲಿದೆ. ಜೂನ್ 30ರಂದು ಯಾತ್ರೆ ಆರಂಭವಾಗಿದ್ದು, 43 ದಿನಗಳ ಕಾಲ ನಡೆಯಲಿದೆ. ಕಳೆದ ಎರಡು ವರ್ಷಗಳಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ವಾರ್ಷಿಕ ತೀರ್ಥಯಾತ್ರೆಯನ್ನು ನಡೆಸಲಾಗಿರಲಿಲ್ಲ. ಈ ವರ್ಷ ದಾಖಲೆಯ ಎಂಟು ಲಕ್ಷ ಯಾತ್ರಿಗಳು ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ನಲ್ಲಿರುವ ಪಹಲ್ಗಾಮ್‌ನಿಂದ 45 ಕಿಮೀ ದೂರದಲ್ಲಿರುವ ಪವಿತ್ರ ಗುಹೆಗೆ ಪೂಜೆ ಸಲ್ಲಿಸಲು ಭಾರತದಾದ್ಯಂತ ಭಕ್ತರು ಬರುತ್ತಾರೆ. ಪಹಲ್ಗಾಮ್​​ನಿಂದ ಗುಹೆಯನ್ನು ತಲುಪಲು ಯಾತ್ರಿಗಳಿಗೆ ಕೆಲವು ದಿನಗಳ ಚಾರಣವನ್ನು ತೆಗೆದುಕೊಳ್ಳುತ್ತದೆ. ಅನೇಕ ಯಾತ್ರಿಕರು ಗುಹೆಯನ್ನು ಬೇಗ ತಲುಪಲು ಬಾಲ್ಟಾಲ್‌ನಿಂದ ಕಡಿಮೆ ಮತ್ತು ಕಡಿಮೆ ಪ್ರಯಾಸಕರ ಇರುವ ಮಾರ್ಗವನ್ನು ಹೆಚ್ಚು ಅವಲಂಬಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ನಡು ರಸ್ತೆಯಲ್ಲೇ ಕುಖ್ಯಾತ ರೌಡಿ ಹಂದಿ ಅಣ್ಣಿ ಬರ್ಬರ ಕೊಲೆ

Last Updated : Jul 14, 2022, 8:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.