ಕರ್ನಾಟಕ

karnataka

By ETV Bharat Karnataka Team

Published : May 21, 2024, 3:22 PM IST

ETV Bharat / snippets

ಬೆಂಗಳೂರು: ನೀರಿನ ಸಂಪ್​ಗೆ ಬಿದ್ದು 5 ವರ್ಷದ ಬಾಲಕ ಸಾವು

ಕೆ.ಆರ್.ಪುರಂ ಸರ್ಕಾರಿ‌ ಆಸ್ಪತ್ರೆ
ಕೆ.ಆರ್.ಪುರಂ ಸರ್ಕಾರಿ‌ ಆಸ್ಪತ್ರೆ (ETV Bharat)

ಬೆಂಗಳೂರು:ಆಟವಾಡುವಾಗ ನೀರಿನ ಸಂಪ್​​ನಲ್ಲಿ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪ ನಗರದಲ್ಲಿ ನಡೆದಿದೆ. ಸುಬೀನ್ ಸಾವನ್ನಪ್ಪಿರುವ ಬಾಲಕ. ನೇಪಾಳ ಮೂಲದ ಸುಬೀನ್ ಪೋಷಕರು ಬೆಂಗಳೂರಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದರು.

ಸೋಮವಾರ ಮಗನನ್ನ ಮನೆಯಲ್ಲಿ ಬಿಟ್ಟು ದಂಪತಿ ಕೆಲಸಕ್ಕೆ ಹೋಗಿದ್ದರು. ಕೆಲಸದಿಂದ‌ ಬಂದ ಬಳಿಕ ನೋಡಿದರೆ ಮಗು ಕಾಣದೇ ಇದ್ದಾಗ ಹುಡುಕಾಟ ನಡೆಸಿದ್ದಾರೆ. ಈ ವೇಳೆ, ಬಾಲಕ ಸಂಪಿನಲ್ಲಿ ಬಿದ್ದಿರುವುದು ತಿಳಿದು ಬಂದಿದೆ. ಕೂಡಲೇ ಪೋಷಕರು ಬಾಲಕನನ್ನು ಕೆ.ಆರ್.ಪುರಂ ಸರ್ಕಾರಿ‌ ಆಸ್ಪತ್ರೆ ದಾಖಲಿಸಲು ಯತ್ನಿಸಿದ್ದಾರೆ‌. ಆದರೆ, ಅಷ್ಟರಲ್ಲೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚಲಿಸುತ್ತಿದ್ದ ಎರಡು ಕಾರುಗಳ ಮೇಲೆ ಬಿದ್ದ ಬೃಹತ್ ಮರ: ತಾಯಿ, ಮಗು ಬಚಾವ್​​ - tree fell on two moving cars

ABOUT THE AUTHOR

...view details