ಗಂಗಾವತಿ:ಕಾರಟಗಿಯ ರಾಮನಗರ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಅಡುಗೆ ಮನೆಯಲ್ಲಿ ಮಂಗಳವಾರ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಎರಡು ಗ್ಯಾಸ್ ಸಿಲಿಂಡರ್ಗಳಿಗೆ ವ್ಯಾಪಿಸಿತ್ತು. ಕೂಡಲೇ ಸಮಯ ಪ್ರಜ್ಞೆ ಮೆರೆದ ಶಿಕ್ಷಕರು ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಅಡುಗೆಗೆ ಮೊದಲು ಒಂದು ಗ್ಯಾಸ್ ಸಿಲಿಂಡರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದರ ಪಕ್ಕದಲ್ಲೇ ಮತ್ತೊಂದು ಗ್ಯಾಸ್ ಸಿಲಿಂಡರ್ ಇಡಲಾಗಿತ್ತು. ಹೀಗಾಗಿ, ಎರಡೂ ಸಿಲಿಂಡರ್ಗಳಿಗೂ ಬೆಂಕಿ ಹಬ್ಬಿದೆ.
ಗ್ಯಾಸ್ ಸಿಲಿಂಡರ್ಗೆ ಬೆಂಕಿ (ETV Bharat) ಕೂಡಲೇ ಶಿಕ್ಷಕರು ಶಾಲೆಯಲ್ಲಿದ್ದ ಸುಮಾರು 150ಕ್ಕೂ ಹೆಚ್ಚು ಮಕ್ಕಳನ್ನು ಹೊರ ಕರೆತಂದು ಸುರಕ್ಷಿತ ಪ್ರದೇಶಕ್ಕೆ ಕಳಿಸಿದ್ದಾರೆ. ಬಳಿಕ ಬೆಂಕಿ ನಂದಿಸಲು ಶಿಕ್ಷಕರು, ಸಿಬ್ಬಂದಿ ಯತ್ನಿಸಿದ್ದಾರೆ. ಬೆಂಕಿ ನಿಯಂತ್ರಕ್ಕೆ ಬಾರದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ.
ಗ್ಯಾಸ್ ಸಿಲಿಂಡರ್ಗೆ ಬೆಂಕಿ (ETV Bharat) ಮೊಟ್ಟೆ ಬೇಯಿಸುವಾಗ ಘಟನೆ:ಮಕ್ಕಳಿಗೆ ಮೊಟ್ಟೆ ಬೇಯಿಸಲು ಸಿಲಿಂಡರ್ ಆನ್ ಮಾಡಿದ ವೇಳೆ ಈ ಅನಾಹುತ ಸಂಭವಿಸಿದೆ ಎಂದು ಗೊತ್ತಾಗಿದೆ. ಮೊದಲಿಗೆ ಮೊಟ್ಟೆ ಬೇಯಿಸಲು ಒಂದು ಸಿಲಿಂಡರ್ ಸಂಪರ್ಕ ಇರುವ ಒಲೆಗೆ ಬೆಂಕಿ ನೀಡಲಾಗಿದೆ. ಆ ನಂತರ ಅದರ ಪಕ್ಕದಲ್ಲಿರುವ ಮತ್ತೊಂದು ಒಲೆಯ ಮೇಲೆ ಸಾರು ಮಾಡಲು ಸಿಲಿಂಡರ್ ಆನ್ ಮಾಡಲಾಗಿದೆ. ಈ ವೇಳೆ ರೆಗ್ಯೂಲೇಟರ್ನಲ್ಲಿ ದೋಷ ಕಾಣಿಸಿಕೊಂಡು ಗ್ಯಾಸ್ ಲೀಕ್ ಆಗಿದೆ.
ಗ್ಯಾಸ್ ಸಿಲಿಂಡರ್ಗೆ ಬೆಂಕಿ (ETV Bharat) ಅಡುಗೆ ಕೋಣೆಯಲ್ಲಿದ್ದ ಅನೇಕ ಆಹಾರ ಸಾಮಗ್ರಿ, ಧವಸ-ಧಾನ್ಯ ಸುಟ್ಟು ಕರಕಲಾಗಿವೆ. ಶಾಲಾ ಹಾಗೂ ಅಡುಗೆ ಸಿಬ್ಬಂದಿ ಹರಸಾಹಸಪಟ್ಟರೂ, ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಸುದ್ದಿ ಹರಡುತ್ತಿದ್ದಂತೆ ಶಾಲೆಯ ಅಕ್ಕಪಕ್ಕದಲ್ಲಿದ್ದ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಅಗ್ನಿಶಾಮಕ ದಳದ ಕಚೇರಿ ಶಾಲೆಗೆ ಹತ್ತಿರವಿದ್ದ ಹಿನ್ನೆಲೆಯಲ್ಲಿ ಮಾಹಿತಿ ತಿಳಿಯುತ್ತಿದ್ದಂತೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ನಂದಿಸಿದ್ದಾರೆ. ಎರಡು ಸಿಲಿಂಡರ್ಗಳು ಬೆಂಕಿಗೆ ಆಹುತಿಯಾಗಿದ್ದು, ಮಿಕ್ಕ ಮೂರು ಸಿಲಿಂಡರ್ಗಳು ಬೆಂಕಿ ತಗುಲಿ ಸುಟ್ಟಿವೆ. ಡ್ಯಾಮೇಜ್ ಆಗಿರುವ ಸಿಲಿಂಡರ್ ಬಳಸಿದರೆ ಮತ್ತೆ ಅಪಾಯ ಸಂಭವಿಸಬಹುದು ಎಂಬ ಕಾರಣಕ್ಕೆ ಜನವಸತಿರಹಿತ ಪ್ರದೇಶಕ್ಕೆ ಒಯ್ದು ಅನಿಲ್ ಹೊರಕ್ಕೆ ಬಿಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಗ್ಯಾಸ್ ಸಿಲಿಂಡರ್ಗೆ ಬೆಂಕಿ (ETV Bharat) ಇದನ್ನೂ ಓದಿ:ಬೆಂಗಳೂರು: ಇವಿ ಬೈಕ್ ಶೋ ರೂಮ್ನಲ್ಲಿ ಬೆಂಕಿ: 30ಕ್ಕೂ ಹೆಚ್ಚು ಬೈಕ್ಗಳು ಆಹುತಿ - FIRE AT ELECTRICAL BIKE SHOWROOM