ಕರ್ನಾಟಕ

karnataka

ETV Bharat / bharat

ಕಾಶಿಯಲ್ಲಿ ಶಿವ - ಪಾರ್ವತಿಗೆ ಮದುವೆ; ಮಹಾಶಿವರಾತ್ರಿಯಂದು 9 ಲಕ್ಷ ಭಕ್ತರು ಭೇಟಿ - MAHASHIVRATRI VISHWADHAM DARSHAN

ವಾರಾಣಸಿಯಲ್ಲಿನ ವಿಶ್ವನಾಥನ ಮದುವೆಯನ್ನು ಮಹಾಶಿವರಾತ್ರಿಯಂದು ಬಲು ಜೋರಾಗಿ ಆಚರಿಸಲಾಗುವುದು. ಈ ವಿವಾಹ ಸಂಭ್ರಮಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದವರು

Baba Vishwanath Mata Parvati Amazing marriage Varanasi Akhara Naga Saints wedding
ಕಾಶಿ ವಿಶ್ವನಾಥ (ಈಟಿವಿ ಭಾರತ್​)

By ETV Bharat Karnataka Team

Published : Feb 27, 2025, 11:11 AM IST

ವಾರಾಣಸಿ, ಉತ್ತರಪ್ರದೇಶ: ಭಸ್ಮ ಮತ್ತು ತಿಲಕವನ್ನು ಧರಿಸಿದ ನಾಗ ಸಂತರು ಕುಣಿದು ಕುಪ್ಪಳಿಸುತ್ತಾ ಮುಂದೆ ಸಾಗುತ್ತಿದ್ದರು. ಅತ್ತ ವಿದೇಶಿ ಭಕ್ತರಲ್ಲಿ ಮದುವೆ ಕಣ್ತುಂಬಿಕೊಳ್ಳುವ ತವಕ. ಈ ನಡುವೆ ವರನಂತೆ ಅಲಂಕೃತಗೊಂಡ ಕಾಶಿ ವಿಶ್ವನಾಥ, ರಥವೇರಿ ಸಾಗುತ್ತಿದ್ದರೆ, ಅದರ ಹಿಂದೆಯೇ ಹರ ಹರ ಮಹಾದೇವ್​ ಎಂಬ ಮಂತ್ರ ಘೋಷಗಳ ಅನುರುಣನ.

ಯೆಸ್​​ ಇಂತಹ ದೃಶ್ಯಗಳು ಕಂಡು ಬಂದಿದ್ದು ಕಾಶಿಯ ಶಿವನ ದೇಗುಲದಲ್ಲಿ. ಮಹಾಶಿವರಾತ್ರಿಯಂದು ಇಲ್ಲಿ ಕಾಶಿ ವಿಶ್ವನಾಥ ಹಾಗೂ ಪಾರ್ವತಿಯ ವಿವಾಹ ನಡೆಯುವುದು ಸಂಪ್ರದಾಯ. ಶಿವರಾತ್ರಿಯ ಈ ದಿನದಂತೆ ಶಿವ- ಪಾರ್ವತಿಯರ ಸಂಗಮ ಆಗಿತ್ತು ಎನ್ನುವುದು ನಂಬಿಕೆ. ಈ ಹಿನ್ನೆಲೆಯಲ್ಲಿ ಈ ಸಂಪ್ರದಾಯವನ್ನು ತಲತಲಾಂತರದಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ದೇಗುಲದಲ್ಲಿ ಭಕ್ತರು (ಈಟಿವಿ ಭಾರತ್​)

ಈ ವಿವಾಹದ ಹಿನ್ನೆಲೆಯಲ್ಲಿ ವಿಶ್ವನಾಥ್ ನನ್ನು ರಾಜನಂತೆ ಅಲಂಕರಿಸಲಾಗಿತ್ತು. ವರನ ವೇಷದಲ್ಲಿ ಶಿವ ಕಂಗೊಳಿಸುತ್ತಿದ್ದರೆ, ಮಥುರಾದಿಂದ ತಂದ ವಿಶೇಷ ಕೆಂಪು ಲೆಹೆಂಗಾದಿಂದ ಪಾರ್ವತಿಯನ್ನು ಅಲಂಕರಿಸಲಾಗಿತ್ತು.

ವಾರಾಣಾಸಿಯ ವಿಶ್ವನಾಥ (ಈಟಿವಿ ಭಾರತ್​)

ಹರಿದು ಬಂದ ಭಕ್ತ ಸಾಗರ: ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ವಿಶ್ವನಾಥನ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಆಶೀರ್ವಾದ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರ ದಂಡೇ ದೇಗುಲಕ್ಕೆ ಆಗಮಿಸಿತ್ತು . 5.ಕಿಮೀ ಉದ್ದದ ಸರತಿ ಸಾಲಿನಲ್ಲಿ ಬೆಳಗಿನಿಂದ ಮಧ್ಯರಾತ್ರಿವರೆಗೆ ಸುಮಾರು 9,07,435 ಭಕ್ತರು ದರ್ಶನ ಪಡೆದು, ಶಿವನ ಕೃಪೆಗೆ ಪಾತ್ರರಾದರು . ಬೆಳಗ್ಗೆ ವಿವಿಧ ಅಖಾಡಗಳಿಂದ ನಾಗಾ ಯತಿಗಳು ಮೆರವಣಿಗೆ ಮೂಲಕ ಕಾಶಿ ವಿಶ್ವನಾಥನ ಅನುಗ್ರಹಕ್ಕೆ ಪಾತ್ರರಾದರು.

ವಿಶ್ವನಾಥನಿಗೆ ಅಭಿಷೇಕ (ಈಟಿವಿ ಭಾರತ್​)

ವಿಶ್ವನಾಥನ ದರುಶನಕ್ಕಾಗಿ ವಿವಿಧ ದ್ವಾರಗಳ ನಿರ್ಮಾಣ:ಸನ್ಯಾಸಿಗಳು ಸೇರಿದಂತೆ ಸಾಮಾನ್ಯ ಜನರವರೆಗೆ ಎಲ್ಲರೂ ವಿಶ್ವನಾಥನ ದರ್ಶನ ಮಾಡಿ ಆಶೀರ್ವಾದ ಪಡೆದರು. ಭಕ್ತರ ದರ್ಶನಕ್ಕೆ ಅನುಕೂಲವಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ವಿವಿಧ ದ್ವಾರಗಳನ್ನು ನಿರ್ಮಾಣ ಮಾಡಿತ್ತು . ಈ ವೇಳೆ ವಿಶ್ವನಾಥ್​ನ ಬಾರಾತ್​ (ವರನ ದಿಬ್ಬಣ) ಕೂಡ ನಡೆಯಿತು. ಬಾರಾತ್‌ನ ಮೆರವಣಿಗೆಯಲ್ಲಿ ಅನೇಕ ಸ್ತಬ್ಧಚಿತ್ರಗಳು ಸಹ ಸಾಗಿದವು. ಇದನ್ನೂ ನೋಡಲು ಭಕ್ತರು ಕೂಡ ಕಾತರದಿಂದ ಕಾದು, ನಿಂತು ಬಾರಾತ್​ ವೀಕ್ಷಿಸಿ ಆನಂದಿತರಾದರು.

ವಿಶ್ವನಾಥ ದೇಗುಲ (ಈಟಿವಿ ಭಾರತ್​)

ಪ್ರಥಮ ಪ್ರಹಾರ ಆರತಿ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮಧ್ಯರಾತ್ರಿ 1.30ಕ್ಕೆ ಮೊದಲ ಪ್ರಥಮ ಪ್ರಹಾರ ಆರತಿ ನೆರವೇರಿತು. ಷೋಡಶೋಪಚಾರದಿಂದ ವಿಶ್ವನಾಥನ ಪೂಜೆ ಸಲ್ಲಿಸಲಾಯಿತು. ಬಳಿಕ ಮಹಾ ಆರತಿ ನಡೆದು, ಬಳಿಕ ಭಕ್ತರಿಗೆ ದರ್ಶನಕ್ಕಾಗಿ ಅವಕಾಶ ನೀಡಲಾಯಿತು.

ಕಾಶಿ ವಿಶ್ವನಾಥನ ವಿವಾಹದಲ್ಲಿ ಸನ್ಯಾಸಿಗಳು (ಈಟಿವಿ ಭಾರತ್​)
ವಿಶ್ವನಾಥನ ಮದುವೆ ಕಾರ್ಯ (ಈಟಿವಿ ಭಾರತ್​)

ಇದನ್ನೂ ಓದಿ:ಮಹಾ ಕುಂಭಮೇಳದ ಕೊನೆಯ ದಿನ 1 ಕೋಟಿಗೂ ಹೆಚ್ಚು ಜನರಿಂದ ಪುಣ್ಯಸ್ನಾನ; ಮಹಾಶಿವರಾತ್ರಿಯಂದು ಭಕ್ತಿಭಾವದ 'ಸಂಗಮ'

ಇದನ್ನೂ ಓದಿ: ಮಹಾಶಿವರಾತ್ರಿ ನಿಮಿತ್ತ ನದಿಗಿಳಿದು ಸ್ನಾನ: ಮೂವರು ಸಹೋದರಿಯರು, ಓರ್ವ ಬಾಲಕ ಸೇರಿ ಆರು ಮಂದಿ ಸಾವು!

ABOUT THE AUTHOR

...view details