ಕರ್ನಾಟಕ

karnataka

ETV Bharat / videos

ಅಪಾಯಕಾರಿ ನದಿ ನೀರಿನಲ್ಲಿ ಕಾರು ಓಡಿಸಿ ಯುವಕರ ಹುಚ್ಚಾಟ: ವಿಡಿಯೋ - ರಾಜ್​ಕೋಟ್​ನಲ್ಲಿ ಯುವಕರ ಹುಚ್ಚಾಟ

By

Published : Jul 13, 2022, 9:32 PM IST

ಗುಜರಾತ್​ನಲ್ಲಿ ಮಳೆ ರಣಭೀಕರತೆ ಪಡೆದಿದೆ. ನದಿಗಳು ಪ್ರವಾಹದ ರೀತಿಯಲ್ಲಿ ಹರಿಯುತ್ತಿವೆ. ನದಿ ಪಾತ್ರಗಳಿಗೆ ಜನರು ತೆರಳದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಈ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಯುವಕರ ಹುಚ್ಚು ಸಾಹಸದ ವಿಡಿಯೋವೊಂದು ವೈರಲ್​ ಆಗಿದೆ. ರಾಜ್​ಕೋಟ್​ನಲ್ಲಿನ ನದಿಯಲ್ಲಿ ಯುವಕರು ವಾಹನದ ಸಮೇತ ಹುಚ್ಚಾಟ ಮೆರೆದಿದ್ದಾರೆ. ನದಿಯ ದಂಡೆಯ ಮೇಲೆ ಕಾರು ಓಡಿಸಿಕೊಂಡು ಹೋಗಿ ಬಳಿಕ ಅಲ್ಲಿಂದ ಹರಿಯುತ್ತಿರುವ ನದಿ ನೀರಿನಲ್ಲಿಯೇ ಕಾರನ್ನು ಓಡಿಸಿಕೊಂಡು ಬಂದಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಕಾರು ಕೊಚ್ಚಿಕೊಂಡು ಹೋಗಿದ್ದರೆ ಯವಕರು ನೀರು ಪಾಲಾಗುತ್ತಿದ್ದರು. ಈ ಅಪಾಯಕಾರಿ ಸಾಹಸದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ABOUT THE AUTHOR

...view details