ನಮಗ್ ಅನ್ನ ಬ್ಯಾಡ ಊರಿಗಿ ಕಳಿಸ್ರೀ: ಬೀದರ್ನಲ್ಲಿರುವ ಯುಪಿ ಕಾರ್ಮಿಕರ ದಯನೀಯ ಸ್ಥಿತಿ! - ಬೀದರ್ನಲ್ಲಿರುವ ಉತ್ತರ ಪ್ರದೇಶದ ಕೂಲಿ ಕಾರ್ಮಿಕರು
ಬೀದರ್: ಉತ್ತರ ಪ್ರದೇಶದಿಂದ ಬೀದರ್ ನಗರಕ್ಕೆ ಕೆಲಸಕ್ಕೆಂದು ಬಂದ ಜನರ ಬದುಕು ಅಕ್ಷರಶಃ ದುಸ್ತರವಾಗಿದೆ. ಲಾಕ್ಡೌನ್ನಿಂದಾಗಿ ಮನೆ ಬಾಡಿಗೆ ಕಟ್ಟಲು ಆಗುತ್ತಿಲ್ಲ. ಸರ್ಕಾರ ನೀಡಿದ ಆಹಾರ ಧಾನ್ಯಗಳು ಸಾಕಾಗ್ತಿಲ್ಲ ರೀ. ನಮಗ್ ಅನ್ನ ಬ್ಯಾಡ, ಊರಿಗಿ ಕಳಿಸ್ರೀ... ಅಂತಿದ್ದಾರೆ ದಿಕ್ಕು ತೋಚದಂತಾಗಿರುವ ಕಾರ್ಮಿಕರು. ಈಟಿವಿ ಭಾರತನೊಂದಿಗೆ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದಾರೆ ಈ ಬಡಪಾಯಿಗಳು.