ಕರ್ನಾಟಕ

karnataka

ETV Bharat / videos

ಕೇರಳದಲ್ಲಿ ಭಾವೈಕ್ಯತೆ ಸಾರುವ ಓಣಂ ಹಬ್ಬ.. ಪ್ರಧಾನಿ ಮೋದಿ ಶುಭಾಶಯ - Etv bharat kannada

By

Published : Sep 8, 2022, 12:23 PM IST

ತಿರುವನಂತಪುರಂ: ಕೇರಳದಲ್ಲಿ ಓಣಂ ಹಬ್ಬ ಕಳೆಗಟ್ಟಿದೆ. ಕೋಝಿಕೋಡ್‌ನಲ್ಲಿ ಸಾಂಪ್ರದಾಯಿಕ ಹೂಗಳಿಂದ ರಚಿಸುವ ಆಕರ್ಷಕ ವಿನ್ಯಾಸ 'ಪೂಕಳಂ' ಗಮನ ಸೆಳೆಯಿತು. ಇಲ್ಲಿನ ಕೋಝಿಕೋಡ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಸೇರಿದ ಜನರು ಬಗೆ ಬಗೆಯ ಪುಷ್ಪಗಳಿಂದ ಮನ ಸೆಳೆಯುವ ಸುಂದರ ಚಿತ್ತಾರ ಬಿಡಿಸಿದರು. ಸಾಂಪ್ರದಾಯಿಕ ಹಬ್ಬ ಓಣಂ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಜನತೆಗೆ ಹಬ್ಬದ ಶುಭಾಶಯ ಕೋರಿದ್ದಾರೆ. " ಕೇರಳದ ಜನತೆ ಹಾಗು ವಿಶ್ವದಾದ್ಯಂತ ಇರುವ ಮಲಯಾಳಿ ಸಮುದಾಯಕ್ಕೆ ಓಣಂ ಶುಭಾಶಯಗಳು. ಈ ಹಬ್ಬವು ನಮ್ಮ ಬದುಕಿನಲ್ಲಿ ಪ್ರಕೃತಿ ಮಾತೆಯ ಮಹತ್ವ ಮತ್ತು ರೈತ ಸಮುದಾಯದ ಕಠಿಣ ಪರಿಶ್ರಮವನ್ನು ಬಿಂಬಿಸುತ್ತದೆ. ಓಣಂ ಹಬ್ಬ ಸಮಾಜದಲ್ಲಿ ಸಾಮರಸ್ಯದ ಸಂದೇಶ ಹರಡಲಿ" ಎಂದು ಮೋದಿ ಹರಸಿದ್ದಾರೆ.

ABOUT THE AUTHOR

...view details