ಮೆಡಿಕಲ್ ಸ್ಕ್ರೀನಿಂಗ್ಗೆ ಒಳಗಾದ ಸಂಸದ ನಾರಾಯಣ ಸ್ವಾಮಿ - chitradurga MP news
ಚಿತ್ರದುರ್ಗ ನಗರದ ಅಂಚೆ ಕಚೇರಿಗೆ ಭೇಟಿ ನೀಡಿದ ಸಂಸದ ಎ. ನಾರಾಯಣ ಸ್ವಾಮಿಯವರನ್ನು ಮೆಡಿಕಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಯಿತು. ಈ ವೇಳೆ ಅವರ ದೇಹದ ಉಷ್ಣತೆ 33 ಡಿಗ್ರಿ ಇದೆ ಎಂದು ಅಂಚೆ ಕಚೇರಿ ಸಿಬ್ಬಂದಿ ತಿಳಿಸಿದಾಗ ಇದಕ್ಕೆ ಸಂಸದರು ಒಪ್ಪಲಿಲ್ಲ. ಅಷ್ಟು ಕಡಿಮೆ ಇರಲಿಕ್ಕಿಲ್ಲ, ನಿಮಗೆ ಸರಿಯಾಗಿ ಚೆಕ್ ಮಾಡಲು ಬರುತ್ತಿಲ್ಲ. ನನ್ನ ಟೆಂಪರೇಚರ್ ಬಹುಶಃ 90 ಇರಬೇಕು ಎಂದು ಹೇಳಿ ನಗೆಪಾಟಲಿಗೊಳಗಾದರು.