ಕರ್ನಾಟಕ

karnataka

ETV Bharat / videos

ಗಾಂಜಾ ಮತ್ತಿನಲ್ಲಿ ಪುಂಡರ ಕಿರಿಕ್: ಯಾಕ್ರಪ್ಪ ಗಲಾಟೆ ಮಾಡ್ತೀರಾ ಅಂದಿದಕ್ಕೆ ಮನೆ ಮಾಲೀಕರ ಮೇಲೆ ಹಲ್ಲೆ - ಗಾಂಜಾ ಮತ್ತಿನಲ್ಲಿ ಗಲಾಟೆ

By

Published : Sep 28, 2022, 7:56 AM IST

ಬೆಂಗಳೂರು: ಗಾಂಜಾ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ ಮಾಡಿರುವ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌. ಸೆ. 20ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂದು ರಾತ್ರಿ ವೇಳೆ ಕಾಂಪೌಂಡ್ ಒಳಭಾಗದಲ್ಲಿ ಓಡಾಡುತ್ತಿದ್ದ ಯುವಕರನ್ನು ಮನೆ ಮಾಲೀಕರು, ಗಾಂಜಾ ವಾಸನೆ ಬರ್ತಿದೆ, ಇಲ್ಲಿ ಯಾಕೆ ಓಡಾಡಿ ಗಲಾಟೆ ಮಾಡ್ತಿರಾ? ಎಂದು ಪ್ರಶ್ನಿಸಿದ್ದಾರೆ. ಆಗ ನಶೆಯಲ್ಲಿದ್ದ ಪುಂಡರು ನಮ್ಮನ್ನೇ ಪ್ರಶ್ನಿಸ್ತಿರಾ ಎಂದು ಗಲಾಟೆ ಮಾಡಿ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಪ್ರಕರಣ ದಾಖಲಿಸದೆ ರಾಜಿ ಸಂಧಾನ ಮಾಡಿರುವ ಆರೋಪ ಕೇಳಿ ಬಂದಿದೆ‌. ಗಲಾಟೆ‌ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ‌.

ABOUT THE AUTHOR

...view details