ಕೆಪಿಸಿಸಿ ಅಧ್ಯಕ್ಷಗಾದಿಗೆ ಏರಲು ಕೈ ನಾಯಕರಲ್ಲಿ ಪೈಪೋಟಿ... ವೇಣುಗೋಪಾಲ್ಗೆ ಷರತ್ತು ವಿಧಿಸಿದರಾ ಡಿಕೆಶಿ!? - ಸಾರ್ವತ್ರಿಕ ಚುನಾವಣೆಗೆ ಮೂರುವರೆ ವರ್ಷ
ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷಗಾದಿಗೆ ಏರಲು ಕೈ ನಾಯಕರಲ್ಲಿ ಪೈಪೋಟಿ ನಡೆಯುತ್ತಿರುವ ಸಂದರ್ಭದಲ್ಲಿ ಒದಗಿ ಬಂದಿರುವ ಅವಕಾಶಕ್ಕೆ ಮಾಜಿ ಸಚಿವ ಡಿಕೆಶಿ ಒಂದಿಷ್ಟು ಶರತ್ತು ವಿಧಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸಿದ್ದರಾಮಯ್ಯ ನಂತರ ರಾಜ್ಯ ಕಾಂಗ್ರೆಸ್ನಲ್ಲಿ ಪಕ್ಷ ಮುನ್ನಡೆಸುವ ಹಾಗೂ ಕಟ್ಟಿ ಬೆಳೆಸುವ ನಾಯಕರ ಹುಡುಕಾಟ ಆರಂಭವಾಗಿದ್ದು, ಹುಡುಕಾಟದಲ್ಲಿ ಡಿ.ಕೆ.ಶಿವಕುಮಾರ್ ಮುಂದಿದ್ದಾರೆ ಎನ್ನಲಾಗುತ್ತಿದೆ.