ಶಿವಮೊಗ್ಗದಲ್ಲಿ ಗುರುಕಿರಣ್ ಮೋಡಿ... ಹಿಂದಿ ಹಾಡು ಹಾಡಿದ ಸಂಸದ ರಾಘವೇಂದ್ರ - Shivamogga Yuva Dasara
ಶಿವಮೊಗ್ಗ: ಇಲ್ಲಿನ ಫ್ರೀಡಂ ಪಾರ್ಕ್ನಲ್ಲಿ ದಸರಾ ಹಬ್ಬದ ಹಿನ್ನೆಲೆ ಯುವದಸರಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್ ಹಾಡಿಗೆ ಮಲೆನಾಡಿನ ಜನರು ಮನಸೋತರು. ಅಪ್ಪು ಅವರ ಬೊಂಬೆ ಹೇಳುತೈತೆ ಹಾಡಿಗೆ ಸಾವಿರಾರು ಜನ ಮೊಬೈಲ್ ಲೈಟ್ ಹಾಕಿ ಅಪ್ಪುಗೆ ದೀಪ ನಮನ ಸಲ್ಲಿಸಿದರು. ಇದೇ ವೇಳೆ ಸಂಸದ ಬಿ.ವೈ ರಾಘವೇಂದ್ರ ಅವರು ಹಿಂದಿ ಹಾಡು ಹಾಡಿದರು.