ಕರ್ನಾಟಕ

karnataka

ಅಪ್ರಾಪ್ತರಿಂದ ಕಾರು ಅಪಘಾತ : ಮೂವರಿಗೆ ಗಂಭೀರ ಗಾಯ

By

Published : Jul 6, 2022, 6:40 PM IST

Published : Jul 6, 2022, 6:40 PM IST

ಗುಂಟೂರು (ಆಂಧ್ರಪ್ರದೇಶ) : ಜಿಲ್ಲೆಯ ತೆನಾಲಿಯಲ್ಲಿ ಕಾರೊಂದು ಅವಾಂತರ ಸೃಷ್ಟಿಸಿದೆ. ದುಗ್ಗಿರಾಲ ಕಡೆಯಿಂದ ತೆನಾಲಿಗೆ ಬರುತ್ತಿದ್ದ ಇಬ್ಬರು ಅಪ್ರಾಪ್ತ ಗಣಿ ಕಾರ್ಮಿಕರು ಅತಿವೇಗದಲ್ಲಿ ಕಾರು ಚಾಲನೆ ಮಾಡುತ್ತಿದ್ದು, ಪಟ್ಟಣದ ಟೆಲಿಫೋನ್ ಎಕ್ಸ್‌ಚೇಂಜ್ ರಸ್ತೆಯಲ್ಲಿ ಕಾರು ನಿಯಂತ್ರಣ ತಪ್ಪಿ ರಿಕ್ಷಾ ದುರಸ್ತಿ ಮಾಡುತ್ತಿದ್ದ ಮೂವರಿಗೆ ಗುದ್ದಿದೆ. ಈ ಅಪಘಾತದಲ್ಲಿ ಓರ್ವನ ಕಾಲು ನಜ್ಜುಗುಜ್ಜಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ತೆನಾಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details