ಮಾಘ ಚೌತಿ ಹಬ್ಬದ ಹಿನ್ನಲೆ, ಕಾರವಾರದಲ್ಲಿ ವಿಶೇಷ ಗಣೇಶ ಮೂರ್ತಿ ಪೂಜೆ...! - ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣಪತಿ ಮೂರ್ತಿಗಳನ್ನು ಇಟ್ಟು ಪೂಜೆ
ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣಪತಿ ಮೂರ್ತಿಗಳನ್ನು ಇಟ್ಟು ಪೂಜೆ ಮಾಡುವುದು ವಾಡಿಕೆ. ಈಗಾಗಲೇ ಹಬ್ಬ ಮುಗಿದು ಐದಾರು ತಿಂಗಳುಗಳೇ ಕಳೆದಿದ್ದು ಮತ್ತೆ ಹಬ್ಬ ಬರಬೇಕು ಅಂದ್ರೆ ಇನ್ನೂ ಹಲವು ತಿಂಗಳುಗಳು ಕಳೆಯಬೇಕು. ಆದ್ರೆ, ಇಲ್ಲೊಂದು ಊರಿನಲ್ಲಿ ಇವತ್ತು ಮನ ಮನೆಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು. ಅರೇ ಏನಪ್ಪಾ ಇದು ಗಣಪತಿ ಹಬ್ಬ ಮುಗಿದ್ರೂ ಇವತ್ತು ಯಾಕೆ ಆಚರಣೆ ಮಾಡ್ತಿದ್ದಾರೆ ಅಂತೀರಾ? ಹಾಗಿದ್ರೆ ಈ ಸ್ಟೋರಿ ನೋಡಿ.