ಕರ್ನಾಟಕ

karnataka

ETV Bharat / videos

ಸಿಎಂ ಕಾರ್ಯಕ್ರಮದಲ್ಲಿ ಕರಪತ್ರ ಎಸೆದು ಯುವಕ ಪ್ರತಿಭಟನೆ.. ಯಾತಕ್ಕಾಗಿ ಈ ಆಕ್ರೋಶ? - ಯುವಕ ಪ್ರತಿಭಟನೆ

By

Published : Jan 15, 2020, 2:54 PM IST

ಹರಿಹರದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಮಾತೆ ಕಿರು ಬಸಿಲಿಕ ಸಾಂಭ್ರಮಿಕ ಘೋಷಣೆ ಸಮಾರಂಭದಲ್ಲಿ ಸಿಎಂ ಭಾಷಣ ಮಾಡುವ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಹರಿಹರ ತಾಲೂಕು ಘಟಕದ ಸಂಚಾಲಕ ಪಿ.ಜೆ ಮಹಾಂತೇಶ್ ಕರ ಪತ್ರ ಎಸೆದು ಪ್ರತಿಭಟನೆ ನಡೆಸಿದ್ದಾರೆ. ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿ ಮಾಡುವ ಮೂಲಕ ದಲಿತರಿಗೆ ಒಳಮೀಸಲಾತಿ ನೀಡುವಂತೆ ಯುವಕ ಸಿಎಂಗೆ ಒತ್ತಾಯಿಸಿದ್ದಾನೆ. ಸಿಎಂ ಗಮನ ಸೆಳೆಯಲು ಯುವಕ ಕರಪತ್ರಗಳನ್ನ ಎಸೆದು ಪ್ರತಿಭಟನೆ ಸಲ್ಲಿಸಿದ್ದಾನೆ. ಈ ಮಧ್ಯೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದರು.

ABOUT THE AUTHOR

...view details