ವೈಫೈ ಚೌಪಾಲ್ನಿಂದ ಬಾರದ ಇಂಟರ್ನೆಟ್.. ಜನರಿಗೆ ತಲುಪುತ್ತಿಲ್ಲ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ!! - ಇಂಟರ್ನೆಟ್ ಸೇವೆ ಕಡಿತ
ಕಾರವಾರ : ಕೇಂದ್ರ ಸರ್ಕಾರ ಪ್ರತಿ ಗ್ರಾಮ ಗ್ರಾಮಗಳಲ್ಲೂ ಇಂಟರ್ನೆಟ್ ಸೇವೆ ನೀಡಲು 'ವೈಫೈ ಚೌಪಾಲ್' ಯೋಜನೆಯೊಂದನ್ನು ಪ್ರಾರಂಭಿಸಿತ್ತು. ಹಳ್ಳಿಯ ಜನರಿಗೆ ಸಿಗಬೇಕಿದ್ದ ಈ ಸೌಲಭ್ಯ ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ ಬಿಎಸ್ಎನ್ಎಲ್ ಹಾಗೂ ಗುತ್ತಿಗೆ ಪಡೆದ ಕಂಪನಿಗಳ ನಿರ್ಲಕ್ಷ್ಯತನದಿಂದಾಗಿ ಹಳ್ಳ ಹಿಡಿದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆ ಪ್ರಯೋಜನಕ್ಕೆ ಬಾರದಂತಾಗಿದೆ..