ಕರ್ನಾಟಕ

karnataka

By

Published : Nov 9, 2019, 5:48 PM IST

ETV Bharat / videos

ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ನಾವೆಲ್ಲಾ ತಲೆ ಬಾಗಲೇಬೇಕು: ಮಸ್ಲಿಂ ಧರ್ಮಗುರು

ಕೊಪ್ಪಳ: ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿಗೆ ಪ್ರತಿಯೊಬ್ಬರು ತಲೆ ಬಾಗಬೇಕು ಎಂದು ಮುಸ್ಲಿಂ ಸಮಾಜದ ಧರ್ಮಗುರುಗಳಾದ ಮುಫ್ತಿ ನಜೀರ್ ಅಹ್ಮಮದ್ ಖಾದ್ರಿ ತಸ್ಕೀನ್ ಹೇಳಿದ್ದಾರೆ. ದೇಶದ ಹಿತದೃಷ್ಟಿಯಿಂದ ಸರ್ವೋಚ್ಛ ನ್ಯಾಯಾಲಯ ಈ ತೀರ್ಪು ನೀಡಿದೆ. ಅದಕ್ಕೆ ನಾವೆಲ್ಲರೂ ತಲೆ ಬಾಗಲೇಬೇಕು. ಈ ತೀರ್ಪು ಬರುವ ಒಂದು ತಿಂಗಳ ಮುಂಚಿತವಾಗಿಯೇ ಪ್ರಾರ್ಥನೆಗೆ ಬರುವ ಸಮಾಜದ ಎಲ್ಲರಿಗೂ ಮನವಿ ಮಾಡಲಾಗಿತ್ತು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಜನರು ಸಹ ನಡೆದುಕೊಂಡಿದ್ದಾರೆ.‌ ಇದೇ ರೀತಿ‌‌ ಮುಂದೆಯೂ ಸಹ ಎಲ್ಲಾ ಸಮಾಜದವರು ಸೌಹಾರ್ದತೆಯಿಂದ ಬಾಳಬೇಕು ಎಂದರು.

ABOUT THE AUTHOR

...view details