ಕರ್ನಾಟಕ

karnataka

ಸಿಬಿಐ ವಿಚಾರಣೆ ಎದುರಿಸಿ ಹೊರ ಬಂದ ಕುಲಕರ್ಣಿ ಆಪ್ತ ಸಹಾಯಕ ಶ್ರೀ ಪಾಟೀಲ್

By

Published : Nov 5, 2020, 1:28 PM IST

ಧಾರವಾಡ: ಯೋಗೇಶ್​ ಗೌಡ ಕೊಲೆ ಪ್ರಕರಣ ಕುರಿತಂತೆ ವಿನಯ ಕುಲಕರ್ಣಿ ಆಪ್ತ ಸಹಾಯಕ ಶ್ರೀ ಪಾಟೀಲ್​ ಹಾಗೂ ಬಿಲ್ಡರ್ ರೂಪೆನ್ ಸಿಬಿಐ ವಿಚಾರಣೆ ಎದುರಿಸಿ ಹೊರ ಬಂದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸುದೀರ್ಘ ವಿಚಾರಣೆಯ ಬಳಿಕ ರೂಪೆನ್ ಹಾಗೂ ಶ್ರೀಪಾಟೀಲ್​ನಿಂದ ಸಿಬಿಐ ಅಧಿಕಾರಿಗಳು ಕೊಲೆ ಪ್ರಕರಣದ ಕುರಿತು ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವು ಜನರನ್ನು ಕರೆಯಿಸಿ ವಿಚಾರಣೆಗೊಳಪಡಿಸುವ ಸಾಧ್ಯತೆಯಿದ್ದು, ಯಾರ‍್ಯಾರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.

ABOUT THE AUTHOR

...view details