ಕರ್ನಾಟಕ

karnataka

By

Published : Nov 9, 2019, 5:56 PM IST

ETV Bharat / videos

ಬೆಳಗಾವಿ ಯೋಧನ ಅಂತಿಮ ಯಾತ್ರೆ ಸಾಗುವ ದಾರಿ ಸಿಂಗರಿಸಿದ ಗ್ರಾಮಸ್ಥರು, ರಂಗೋಲಿ, ಹೂವಿನಿಂದ ಹುತಾತ್ಮನಿಗೆ ಗೌರವ

ಪಾಕಿಸ್ತಾನ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಹುತಾತ್ಮನಾದ ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ಯೋಧ ರಾಹುಲ್ ಭೈರು ಸುಳಗೇಕರ (25) ಅವರ ಪಾರ್ಥಿವ ಶರೀರ ಹುಟ್ಟೂರಿಗೆ ಆಗಮಿಸಲಿದ್ದು, ಈ ಹಿನ್ನೆಲೆ ಗ್ರಾಮಸ್ಥರು ಯೋಧನ ಗೌರವಾರ್ಥವಾಗಿ ಅಂತಿಮ ಯಾತ್ರೆ ಸಾಗುವ ಮಾರ್ಗದಲ್ಲಿ ರಂಗೋಲಿ ಹಾಕಿ ಸಿಂಗಾರ ಮಾಡಿದ್ದಾರೆ. ಗ್ರಾಮದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್​ ಮಾಡಲಾಗಿದ್ದು, ಪ್ರತಿ ಮನೆಯಲ್ಲಿಯೂ ಸೂತಕದ ಛಾಯೆ ಆವರಿಸಿದೆ.

ABOUT THE AUTHOR

...view details