ಕರ್ನಾಟಕ

karnataka

ಮದ್ಯ ಮಾರಾಟಕ್ಕೆ ವಾಟಾಳ್ ವಿರೋಧ: ಖಾಲಿ ಬಾಟಲ್ ಉಲ್ಟಾ ಮಾಡಿ ಪ್ರತಿಭಟನೆ

By

Published : May 2, 2020, 9:46 PM IST

ಬೆಂಗಳೂರು: ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದಕ್ಕೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಖಾಲಿ ಬಾಟಲ್ ಉಲ್ಟಾ ಮಾಡಿ ಒಬ್ಬಂಟಿಯಾಗಿ ಪ್ರತಿಭಟನೆ ನಡೆಸಿದರು. ಮದ್ಯ ಮಾರಾಟ ಮಾಡಬಾರದು, ಬಾರ್ ತೆರೆಯಬಾರದು. ಮದ್ಯ ನರಕಕ್ಕೆ ಸಮ ಎಂದು ಘೋಷಣೆ ಕೂಗಿ ಏರ್ಪೋರ್ಟ್ ರಸ್ತೆಯಲ್ಲಿ ವಿರೋಧ ವ್ಯಕ್ತಪಡಿಸಿದರು. ಲಾಕ್ ಡೌನ್ 3.0 ಸಡಿಲಿಕೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೇ 4ರಿಂದ ಮದ್ಯ ಮಾರಾಟ ಮಾಡಲು ಅನುಮತಿ ನೀಡಿದ್ದು, ಇದಕ್ಕೆ ವಾಟಾಳ್ ಬೇಸರ ವ್ಯಕ್ತಪಡಿಸಿ, ಖಾಲಿ ಬಾಟಲ್ ಹಿಡಿದು ಆಕ್ರೋಶ ಹೊರಹಾಕಿದ್ದಾರೆ.

ABOUT THE AUTHOR

...view details