ಕರ್ನಾಟಕ

karnataka

By

Published : Jan 21, 2020, 9:31 AM IST

ETV Bharat / videos

ಸ್ಪ್ರೇ ಬಳಸಿ ಮತ್ತು ಬರಿಸಿ 15 ಕುರಿಗಳನ್ನು ಹೊತ್ತೊಯ್ದ ಕುರಿಗಳ್ಳರು

ವಿಜಯಪುರ: ದೊಡ್ಡಿಯಲ್ಲಿದ್ದ 15 ಕುರಿಗಳು ಕಳ್ಳತನವಾಗಿರುವ ಘಟನೆ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದಲ್ಲಿ ನಡೆದಿದೆ. ಸುಭಾಷ ವಾಲೀಕಾರ ಎಂಬುವವರಿಗೆ ಸೇರಿದ ಕುರಿಗಳನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಸ್ಪ್ರೇ ಬಳಸಿ ಕುರಿಗಳಿಗೆ ಮತ್ತು ಬರಿಸಿ ದೊಡ್ಡಿಯಿಂದ ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ಘಟನೆ ನಡೆದಿದ್ದು ಗೊತ್ತಾಗಿಲ್ಲ ಎಂದು ಕುರಿ ಮಾಲೀಕ ಹೇಳಿದ್ದಾರೆ. ಕಳುವಾಗಿರುವ ಕುರಿಗಳ ಬೆಲೆ ಸುಮಾರು 1.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details