ಪರಸ್ಪರ ಹೊಡೆದಾಡಿಕೊಂಡ ಎರಡು ಕುಟುಂಬಗಳು.. ಮಾಜಿ ಪುರಸಭೆ ಉಪಾಧ್ಯಕ್ಷನ ದರ್ಪ! - latest street fight news
ನಿವೇಶನ ಹಂಚಿಕೆ ವಿಚಾರದಲ್ಲಿ ಎರಡು ಕುಟುಂಬಗಳು ಪರಸ್ವರ ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಕಲ್ಕುಣಿಕೆ ಗ್ರಾಮದಲ್ಲಿ ನಡೆದಿದೆ. ಹುಣಸೂರು ಪುರಸಭೆ ಮಾಜಿ ಉಪಾಧ್ಯಕ್ಷ ಶಿವರಾಜ್, ರೌಡಿಯಂತೆ ವರ್ತಿಸಿ ರಾಘವೇಂದ್ರ, ಚೆನ್ನಪ್ಪ, ರೇಣುಕಮ್ಮ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾನೆ. ಶಿವರಾಜ್ಗೆ ಪತ್ನಿ, ಮಗಳು, ಅಳಿಯ, ಅಣ್ಣನ ಮಗ ಸಾಥ್ ನೀಡಿದ್ದಾರೆ. ವಿಷಯ ತಿಳಿದ ಹುಣಸೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ