ಕರ್ನಾಟಕ

karnataka

ETV Bharat / videos

ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​​ನಲ್ಲಿ ವಾಹನ ಸಂಚಾರ ಬಂದ್... ಗ್ರೌಂಡ್​ ರಿಪೋರ್ಟ್​ - Traffic banned at Charmudi Ghat till August 11

By

Published : Aug 9, 2020, 10:01 AM IST

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಈ ಮಳೆಗೆ ಮಲೆನಾಡು ಭಾಗದ ಜನರು ಹೈರಾಣಾಗಿದ್ದಾರೆ. ಪ್ರತಿನಿತ್ಯ ಈ ಭಾಗದಲ್ಲಿ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಿವೆ. ಕೊಟ್ಟಿಗೆಹಾರ ಸಮೀಪ ಇರುವ ಚಾರ್ಮಾಡಿ ಘಾಟ್​​ನಲ್ಲಿ ಆಗಸ್ಟ್ 11ರ ವರೆಗೂ ಸಂಪೂರ್ಣವಾಗಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಬದಲಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಮೂಡಿಗೆರೆ, ಶಿರಾಡಿಘಾಟ್ ರಸ್ತೆ ಮೂಲಕ ಸಾರ್ವಜನಿಕರು ಸಂಚಾರ ಮಾಡುವಂತೆ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ABOUT THE AUTHOR

...view details