ಈ ಬಾರಿಯ ಬಜೆಟ್ ನಿರಾಶದಾಯಕ: ಹೆಚ್.ಎಸ್. ಸುಂದರೇಶ್ - ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್
ಶಿವಮೊಗ್ಗ: ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ನಿರಾಶದಾಯಕ ಮತ್ತು ಅತ್ಯಂತ ಕಳಪೆಯದ್ದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಟೀಕಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಜನರು ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದರು. ಆದ್ರೆ ಇದು ಹುರುಳಿಲ್ಲದ ಬಜೆಟ್ ಆಗಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಹೇಳಿದ ಯಾವ ಅಂಶಗಳೂ ಬಜೆಟ್ನಲ್ಲಿ ಇಲ್ಲ. ಪ್ರಣಾಳಿಕೆಯಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಅಂತಹ ಯಾವ ಪ್ರಯತ್ನವೂ ಬಜೆಟ್ನಲ್ಲಿ ಆಗಿಲ್ಲ. ಹಾಗಾಗಿ ಇದು ಯಾರಿಗೂ ಉಪಯೋಗಕ್ಕಿಲ್ಲದ ಬಜೆಟ್ ಎಂದು ಟೀಕಿಸಿದ್ದಾರೆ.