ಬೆಂಗಳೂರಲ್ಲಿ ಹಗಲಿನಲ್ಲಿ ಟಿವಿ ಸೀರಿಯಲ್ ನೋಡೋ ಮಹಿಳೆಯರ ಮನೆಗಳನ್ನೇ ಟಾರ್ಗೆಟ್ ಮಾಡಿ ತನ್ನ ಕೈಚಳಕ ತೋರಿ ಚಿನ್ನಾಭಾರಣಗಳನ್ನು ದೋಚುತ್ತಿದ್ದ ಉದಯ್ ಅಲಿಯಾಸ್ ನೀರ್ಮಜ್ಜಿಗೆ ಎಂಬ ಆರೋಪಿಯನ್ನು ಬೆಂಗಳೂರು ಉತ್ತರ ವಿಭಾಗ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.