ಮಂತ್ರಾಲಯದಲ್ಲಿ ಯಾವುದೇ ಪ್ರವಾಹ ಭೀತಿಯಿಲ್ಲ.. ಶ್ರೀ ಸುಬುದೇಂದ್ರ ತೀರ್ಥರು - Tungabhadra River water
ತುಂಗಭದ್ರಾ ನದಿಯಿಂದ ನೀರು ಬಿಟ್ಟಿರುವುದರಿಂದ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಆರಾಧನೆಗೆ ಯಾವುದೇ ತೊಂದರೆಯಿಲ್ಲವೆಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥರು ಹೇಳಿದ್ದಾರೆ. ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನೀರು ಹರಿಯಬಿಟ್ಟ ಪರಿಣಾಮ ಪ್ರವಾಹ ಭೀತಿ ಉಂಟಾಗಿದೆ ಎನ್ನುವ ವಂದತಿ ಹಬ್ಬಿದೆ. ಆದರೆ, ರಾಯರ ಆರಾಧನೆಗೆ ಬರುವ ಭಕ್ತರು ಆತಂಕ ಪಡುವಂತಹ ಅವಶ್ಯಕತೆಯಿಲ್ಲ. ಯಾವುದೇ ಪ್ರವಾಹ ಭೀತಿಯಿಲ್ಲವೆಂದು ಹೇಳಿದ್ದಾರೆ.