ಫಲಿತಾಂಶದ ಬಗ್ಗೆ ಯಾವುದೇ ಆತಂಕವಿಲ್ಲ: ಗೆದ್ದೇ ಗೆಲುವ ವಿಶ್ವಾಸ ನನಗಿದೆ:ಬೈರತಿ ಬಸವರಾಜ್ - ಕೆ.ಆರ್.ಪುರ ಕ್ಷೇತ್ರದ ಉಪ ಚುನಾವಣೆಯ ರಣಕದನ
ಕೆ.ಆರ್.ಪುರ ಕ್ಷೇತ್ರದ ಉಪ ಚುನಾವಣೆಯ ರಣಕದನ ಕೊನೆಗೂ ಮುಗಿದಿದೆ. ಫಲಿತಾಂಶ ಬರುವವರೆಗೂ ಅಭ್ಯರ್ಥಿಗಳ ಎದೆಯಲ್ಲಿ ಒಂದು ರೀತಿಯ ಆತಂಕ ಇರುವುದು ಸಹಜ. ಆದರೆ ನನಗೆ ಯಾವುದೇ ಆತಂಕವಿಲ್ಲ. ನಾನೇ ಭಾರಿ ಮತಗಳ ಅಂತರದಿಂದ ಜಯಗಳಿಸುವೆ ಎಂಬ ವಿಶ್ವಾಸವನ್ನು ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.