ರಾಮಾನುಜಾಚಾರ್ಯರ ಜಯಂತಿ: ಬಡಜನರಿಗೆ ಊಟ, ಹಾಲು ವಿತರಣೆ - ರಾಮಾನುಜಚಾರ್ಯರ ಜಯಂತಿ ಆಚರಣೆ
ಬೆಂಗಳೂರು: ಮಲ್ಲೇಶ್ವರಂನ ಯದುಗಿರಿ ಯತಿರಾಜ ಮಠ ಬಡಜನರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದೆ. ಕಳೆದ ಮಂಗಳವಾರ ರಾಮಾನುಜಾಚಾರ್ಯರ 1003ನೇ ವಾರ್ಷಿಕೋತ್ಸವ ಆಚರಿಸಿದ ಮಠ, ಅಭಿಷೇಕದ ಹಾಲನ್ನು ಸಾರ್ವಜನಿಕರಿಗೆ ಹಂಚಿದರು. ಇದಲ್ಲದೇ ನಿತ್ಯ ಮಧ್ಯಾಹ್ನ ಬಡವರಿಗೆ ಊಟದ ಪ್ಯಾಕೆಟ್ ನೀಡುವ ಸಾಮಾಜಿಕ ಕಾರ್ಯದಲ್ಲಿ ತೊಡಗಿದೆ.