ಕರ್ನಾಟಕ

karnataka

By

Published : Aug 6, 2020, 2:15 PM IST

ETV Bharat / videos

ವರುಣನ ರೌದ್ರ ನರ್ತನ: ಹೋಟೆಲ್ ಛಾವಣಿ ಕುಸಿತ- ತಪ್ಪಿದ ಭಾರಿ ಅನಾಹುತ

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆ ಹಾಗೂ ಬೀಸುತ್ತಿರುವ ಬಿರುಗಾಳಿಗೆ ಇಲ್ಲಿನ ಸ್ಥಳೀಯರು ತತ್ತರಿಸಿ ಹೋಗಿದ್ದು, ಕೊಟ್ಟಿಗೆಹಾರ ರಸ್ತೆಯಲ್ಲಿರುವ ಪ್ರವಾಸೋದ್ಯಮದ ನಿಸರ್ಗ ಗ್ರಾಂಡ್ ಹೋಟೆಲ್​​​​ನ ಛಾವಣಿ ಕುಸಿದು ಬಿದ್ದಿದೆ. ಹೆಂಚುಗಳು ಗಾಳಿಯಲ್ಲಿ ಹಾರಿ ಹೋಗಿದ್ದು, ಹೋಟೆಲ್ ನ ಒಳಗಿರುವ ಕೆಲ ವಸ್ತುಗಳಿಗೂ ಹಾನಿಯಾಗಿದೆ. ಹಂಚುಗಳು ಬೀಳುವ ರಭಸಕ್ಕೆ ಹೋಟೆಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ABOUT THE AUTHOR

...view details