ಮಹದಾಯಿ ಯೋಜನೆಗೆ 500ಕೋಟಿ ಮೀಸಲು: ಧನ್ಯವಾದ ತಿಳಿಸಿದ ರೈತ ಹೋರಾಟಗಾರ - mahadayi project
ಬಜೆಟ್ನಲ್ಲಿ ಮಹದಾಯಿ ಯೋಜನೆಗೆ 500ಕೋಟಿ ಅನುದಾನ ಮೀಸಲಿಟ್ಟ ಹಿನ್ನಲೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕರ್ನಾಟಕ ರೈತ ಸೇನಾ ಸಂಘದ ಅಧ್ಯಕ್ಷ ವಿರೇಶ ಸೊಬರದಮಠ ಧನ್ಯವಾದ ತಿಳಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ಹಿತ ಕಾಪಾಡುವ ನಿರ್ಣಯ ತೆಗೆದುಕೊಂಡಿದ್ದು ಸ್ವಾಗತಾರ್ಹ ಇದೇ ರೀತಿ ಶೀಘ್ರವೇ ಕಾಮಗಾರಿ ಪ್ರಾರಂಭಿಸುವಂತೆ ರಾಜ್ಯದ ಸಂಸದರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.