ಕರ್ನಾಟಕ

karnataka

ಜಿಎಸ್​ಟಿ ಸರಳೀಕರಣಗೊಳಿಸಲು ಟ್ಯಾಕ್ಸ್​ ಪೇಯರ್ಸ್​​​​ ಒತ್ತಾಯ

By

Published : Jan 29, 2021, 10:18 PM IST

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ರಾಜ್ಯ ಟ್ಯಾಕ್ಸ್ ಪೇಯರ್ಸ್ ಅಸೋಸಿಯೇಷನ್‌ ವತಿಯಿಂದ ಅಶ್ವತ್ಥ್ ನಗರದ ಸೆಂಟ್ರಲ್ ಜಿಎಸ್‌ಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘದ ಪ್ರಮುಖರು, ಕಳೆದ ಮೂರು ವರ್ಷಗಳಿಂದ ವಿವಿಧ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಯಾಗಿದೆ. ಕಾಯ್ದೆಯಲ್ಲಿನ ಸಮಸ್ಯೆಗಳ ಕುರಿತಾಗಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಇದರಿಂದ ವ್ಯಾಪಾರಸ್ಥರು ಮತ್ತು ವೃತ್ತಿಪರ ತೆರಿಗೆದಾರರಲ್ಲಿ ಆರ್ಥಿಕ ಮತ್ತು ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ನಿರಾಕರಣೆ, ಜಿಎಸ್​ಟಿ ರಿಟರ್ನ್ ಮರು ಪರಿಶೀಲಿಸಲು ಅನುಮತಿ ಇಲ್ಲದಿರುವುದು, ನೋಂದಣಿ ರದ್ದು ಗೊಳಿಸುವಿಕೆ, ಆದಾಯ ತೆರಿಗೆ ಉಪಯುಕ್ತತೆ, ಜಿಎಸ್​ಟಿ ಪೋರ್ಟಲ್ ಇನ್ನಿತರ ಸಮಸ್ಯೆಗಳ ಪರಿಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ಜಿಎಸ್​​ಟಿಯನ್ನು ಸರಳೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details