ಭಾನುವಾರದ ಕರ್ಪ್ಯೂ ಸಡಿಲಿಕೆ... ಬೆಂಗಳೂರಲ್ಲಿ ಹೇಗಿದೆ ಜನಜೀವನ?
ರಾಜ್ಯ ಸರ್ಕಾರ ಭಾನುವಾರದ ಕರ್ಫ್ಯೂ ಸಡಿಲಿಕೆ ಮಾಡಿದ ಕಾರಣ ಬೆಂಗಳೂರಲ್ಲಿ ಎಂದಿನಂತೆ ವಾಹನಗಳು ರಸ್ತೆಗಿಳಿದಿವೆ. ಸಾರ್ವಜನಿಕರು ವೀಕೆಂಡ್ ಎಂಜಾಯ್ ಮಾಡ್ತಿದ್ದು, ಮಾಂಸ, ತರಕಾರಿ ಖರೀದಿಗೆ ಹೊರಗಡೆ ಬಂದಿದ್ದಾರೆ. ಬೆಳಗ್ಗೆ ಏಳರಿಂದಲೇ ರಸ್ತೆಯಲ್ಲಿ ಎಂದಿನಂತೆ ಜನರ ಹಾಗೂ ವಾಹನಗಳ ಓಡಾಟ ಶುರುವಾಗಿದೆ. ಈ ಬಗ್ಗೆ ನಮ್ಮ ಈಟಿವಿ ಭಾರತ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.