ಕರ್ನಾಟಕ

karnataka

ETV Bharat / videos

ರಾಯಚೂರು: ವಿಷ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆ - student ranganatha committed suicide

By

Published : Mar 16, 2021, 12:15 PM IST

ರಾಯಚೂರು: ವಿಷ ಸೇವಿಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಲಿಂಗಸೂಗೂರಿನ ವಾಲ್ಮೀಕಿ ಸಮುದಾಯದ ಹಾಸ್ಟೇಲ್‌ನಲ್ಲಿ ನಡೆದಿದೆ. ಗುಂತಗೋಳ ಗ್ರಾಮದ ರಂಗನಾಥ(19) ಎಂಬ ವಿದ್ಯಾರ್ಥಿ ಲಿಂಗಸೂಗೂರು ವಿಸಿಬಿ ಕಾಲೇಜಿನಲ್ಲಿ ಬಿ.ಎ. ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದ. ಸದ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ಆದ್ರೆ ಪಾಲಕರು ಬೈದಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಲಿಂಗಸೂಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details