ಎಸ್ಟಿ ಮೀಸಲಾತಿ ಹೋರಾಟ: 3ನೇ ದಿನಕ್ಕೆ ಕಾಲಿಟ್ಟ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಪಾದಯಾತ್ರೆ - Sri Niranjanananda Puri Swamiji padayatre
ಹಾವೇರಿ: ಕುರುಬ ಸಮುದಾಯದವರಿಗೆ ಎಸ್ಟಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಕಾಗಿನೆಲೆಯ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಕೈಗೊಂಡಿರುವ ಪಾದಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂದು ಹೂಲಿಹಳ್ಳಿ ಮಾರ್ಗವಾಗಿ ರಾಣೆಬೆನ್ನೂರು ನಗರದವರೆಗೆ 16 ಕಿ.ಮೀ ಪಾದಯಾತ್ರೆಯನ್ನು ಶ್ರೀಗಳು ನಡೆಸಲಿದ್ದಾರೆ. ನೂರಾರು ಭಕ್ತರ ಜೊತೆ ಹಾಡುತ್ತಾ, ತಮಟೆ ಬಾರಿಸುತ್ತಾ ಸ್ವಾಮೀಜಿ ಪಾದಯಾತ್ರೆ ಮುಂದುವರೆಸಿದ್ದಾರೆ.