ಹರಿಹರದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಔಷಧಿ ಸಿಂಪಡಣೆ
ಕೊರೊನಾ ವೈರಸ್ ನಿಯಂತ್ರಣ ಹಾಗೂ ನಗರದ ಜನತೆಗೆ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಶಾಸಕ ಎಸ್. ರಾಮಪ್ಪ ಅವರು ಹರಿಹರದಲ್ಲಿ ಔಷಧಿ ಸಿಂಪಡನೆಗೆ ಚಾಲನೆ ನೀಡಿದರು. ಮಹಾತ್ಮಾ ಗಾಂಧಿ ವೃತ್ತದಿಂದ ಶಾಸಕ ಎಸ್. ರಾಮಪ್ಪ, ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಪೌರಾಯುಕ್ತೆ ಎಸ್.ಲಕ್ಷ್ಮೀ ನೇತೃತ್ವದಲ್ಲಿ ಅಗ್ನಿ ಶಾಮಕದಳದ ಸಹಾಯದಿಂದ ನಗರದ ಪ್ರತಿ ವಾರ್ಡ್ಗಳಲ್ಲಿನ ರಸ್ತೆಗಳು ಮತ್ತು ಅಂಗಡಿಗಳಿಗೆ ರೋಗ ನಿರೋಧಕ ಔಷಧಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಮತ್ತು ನಗರಸಭಾ ಪೌರಕಾರ್ಮಿಕರು ಸೇರಿ ಸಿಂಪಡಿಸಿದರು.
Last Updated : Mar 29, 2020, 12:24 PM IST
TAGGED:
Harihara news