ಬೈಕ್ ಹೆಡ್ ಲೈಟ್ ಒಳಗೆ ಸೇರಿದ್ದ ನಾಗರಹಾವು! - Mysore district latest news
ಬೈಕ್ ಲೈಟ್ ಒಳಗೆ ಅವಿತು ಕುಳಿತಿದ್ದ ನಾಗರಹಾವಿನ ಮರಿಯನ್ನು ಸ್ನೇಕ್ ಕೆಂಪರಾಜು ರಕ್ಷಣೆ ಮಾಡಿದ್ದಾರೆ. ಇಂದಿರಾ ನಗರದ ನಿವಾರಿ ರಾಘವೇಂದ್ರ ಅವರ ಬೈಕ್ನ ಹೆಡ್ ಲೈಟ್ನಲ್ಲಿ ಅವಿತು ಕುಳಿತಿದ್ದ ನಾಗಪ್ಪ ಬುಸುಗುಟ್ಟುತ್ತಿದ್ದಂತೆ ಎಚ್ಚತ್ತ ಬೈಕ್ ಸವಾರ ಸ್ನೇಕ್ ಕೆಂಪರಾಜು ಅವರಿಗೆ ಕರೆ ಮಾಡಿದ್ದರು. ಸದ್ಯ ಹಾವಿನ ಮರಿಯನ್ನು ರಕ್ಷಣೆ ಮಾಡಲಾಗಿದ್ದು, ಕಾಡಿಗೆ ಬಿಟ್ಟಿದ್ದಾರೆ.