ಕರ್ನಾಟಕ

karnataka

By

Published : Dec 5, 2020, 12:09 PM IST

ETV Bharat / videos

ಈ ಭಾಷೆ, ನೆಲ-ಜಲ ನಮ್ಮ ಉಸಿರು: ದಾವಣಗೆರೆಯಲ್ಲಿ ಪುಟ್ಟ ಬಾಲಕನ ಹೋರಾಟ

ದಾವಣಗೆರೆ : ಕನ್ನಡಪರ ಸಂಘಟನೆಗಳು ಜಿಲ್ಲಾ ಬಂದ್​ಗೆ ಕರೆ ನೀಡಿದ್ದು, ಪುಟ್ಟ ಬಾಲಕನೋರ್ವ ಸಾಥ್ ನೀಡಿದ್ದಾನೆ. ನಗರದ ಜಯದೇವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಬಾಲಕ ಅವಿನಾಶ್ ಭಾಗಿಯಾಗಿದ್ದಾನೆ. ಈ ಭಾಷೆ, ನೆಲ, ಜಲ, ನಾಡು, ನುಡಿಗಾಗಿ, ಭ್ರಷ್ಟ ಹಾಗೂ ದುಷ್ಟರ ವಿರುದ್ಧ ನನ್ನ ಹೋರಾಟ ಎಂಬ ನಾಮಫಲಕವನ್ನು ಹಿಡಿದು ಪ್ರತಿಭಟನೆಗೆ ದನಿಗೂಡಿಸಿದ್ದಾನೆ. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್​​ ಅವರಂತೆ ಬಾಲಕ ವೇಷಭೂಷಣ ಧರಿಸಿ ಗಮನ ಸೆಳೆಯುತ್ತಿದೆ.

ABOUT THE AUTHOR

...view details