ಕರ್ನಾಟಕ

karnataka

ETV Bharat / videos

ಶಿರಾ ಉಪಚುನಾವಣೆ: ದೇವೇಗೌಡರಿಗೆ ನೇಗಿಲು ನೀಡಿ ಗೌರವಿಸಿದ ರೈತರು - ಜೆಡಿಎಸ್​ ಅಭ್ಯರ್ಥಿ ಪರ ದೇವೇಗೌಡ ಕ್ಯಾಂಪೇನ್​

By

Published : Oct 31, 2020, 2:04 AM IST

ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರ ರಂಗೇರಿದೆ. ಈಗಾಗಲೇ ಹೆಚ್. ಡಿ ಕುಮಾರಸ್ವಾಮಿಗೆ ಸಾಲಮನ್ನಾ ಫಲಾನುಭವಿಗಳು ಕುರಿಮರಿ, ರಾಗಿ ನೀಡಿ ಗಮನ ಸೆಳೆದಿದ್ದರು. ಇದೀಗ ಮಾಜಿ ಪ್ರಧಾನಿ ದೇವೇಗೌಡರಿಗೆ ಶಿರಾ ತಾಲೂಕಿನ ಸೀಗನಹಳ್ಳಿ ಗ್ರಾಮಸ್ಥರು ನೇಗಿಲು ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಹೆಗಲ ಮೇಲೆ ನೇಗಿಲು ಇರಿಸಿದ ರೈತರು ಹಸಿರು ಶಾಲು ಹೊದಿಸಿ ಸಂತಸ ಪಟ್ಟರು. ಅಲ್ಲದೆ ವಾಲ್ಮೀಕಿ ರಚಿಸಿದ ರಾಮಾಯಣ ಪುಸ್ತಕ ಉಡುಗೊರೆಯಾಗಿ ನೀಡಿದ್ದು ಇಲ್ಲಿ ಗಮನಾರ್ಹವಾಗಿತ್ತು.

ABOUT THE AUTHOR

...view details