ಇಡಿಯಿಂದ ಡಿಕೆಶಿ ಬಂಧನ... ಕೆಂಗೇರಿ, ಸದಾಶಿವನಗರದ ನಿವಾಸದಲ್ಲಿ ನೀರವ ಮೌನ - ಡಿಕೆಶಿ ಬಂಧನ
🎬 Watch Now: Feature Video
ಜಾರಿ ನಿರ್ದೇಶನಾಲಯದಿಂದ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರ ಬಂಧನ ಹಿನ್ನೆಲೆಯಲ್ಲಿ ಕೆಂಗೇರಿ ಹಾಗೂ ಸದಾಶಿವನಗರದ ಡಿಕೆಶಿ ನಿವಾಸದಲ್ಲಿ ನೀರವ ಮೌನ ಉಂಟಾಗಿದೆ. ಮನೆಯಲ್ಲಿ ಯಾವುದೇ ದೀಪಗಳನ್ನು ಹಚ್ಚದೆ, ಕೇವಲ ಮುಂಬಾಗಿಲಲ್ಲಿ ಡಿಕೆಶಿಯ ಆಪ್ತರು ಟಿವಿಯನ್ನು ವೀಕ್ಷಿಸುತ್ತಿದ್ದಾರೆ. ಸದಾ ಸಾರ್ವಜನಿಕರಿಂದ, ರಾಜಕೀಯ ನಾಯಕರಿಂದ ತುಂಬಿರುತ್ತಿದ್ದ ಟ್ರಬಲ್ ಶೂಟರ್ ನಿವಾಸ ಈಗ ಬಣಗುಡುತ್ತಿದೆ. ಬಂಧನ ನಂತರ ಯಾವುದೇ ರಾಜಕಾರಣಿಗಳು ಅಥವಾ ಆಪ್ತರು ಮನೆಯ ಬಳಿ ಬಂದಿಲ್ಲ ಎನ್ನಲಾಗುತ್ತಿದೆ.