ಕರ್ನಾಟಕ

karnataka

By

Published : Aug 31, 2019, 4:36 PM IST

ETV Bharat / videos

ಮಳೆಯಲ್ಲೇ ನೆರೆ ಹಾನಿ ಪರಿಶೀಲನೆ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ..

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುರಿವ ಮಳೆಯಲ್ಲೂ ಬೆಳ್ತಂಗಡಿ ತಾಲೂಕಿನ ಅನಾರ್ ಮತ್ತು ಹೊಸಮಠಕ್ಕೆ ಭೇಟಿ ನೀಡಿದರು. ಕುಸಿಗೊಂಡಿರುವ ಸೇತುವೆ, ನೆರೆಯಿಂದಾದ ಹಾನಿ ಪರಿಶೀಲಿಸಿದರು. ನೆರೆ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರದ ಗಮನ ಸೆಳೆಯುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ABOUT THE AUTHOR

...view details