ಜಾತ್ರಾ ಮಹೋತ್ಸವ ಹಿನ್ನೆಲೆ... ಜೋಳಿಗೆ ಹಿಡಿದ ಸಿದ್ಧಗಂಗಾ ಶ್ರೀ - ಶ್ರೀ ಸಿದ್ಧಗಂಗಾ ಮಠ
ತುಮಕೂರು: ಶ್ರೀ ಸಿದ್ಧಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಠದ ವತಿಯಿಂದ ಸರ್ವ ಸಿದ್ಧತೆ ನಡೆದಿದೆ. ಜಾತ್ರಾ ಮಹೋತ್ಸವದಲ್ಲಿ ಜಾತಿ ಭೇದ ಮರೆತು ಪ್ರತಿಯೊಬ್ಬರು ಪಾಲ್ಗೊಳ್ಳಬೇಕೆಂದು ಅಭಿಲಾಷೆ ಹೊಂದಿರುವ ಶ್ರೀ ಸಿದ್ದಲಿಂಗ ಸ್ವಾಮೀಜಿ, ನಗರದ ಎಪಿಎಂಸಿ ಯಾರ್ಡ್ನಲ್ಲಿ ವರ್ತಕರ ಬಳಿ ದವಸ ,ಧಾನ್ಯಗಳನ್ನು ದಾನವಾಗಿ ಸ್ವೀಕರಿಸಿದರು. ಸ್ವತಃ ಸ್ವಾಮೀಜಿಗೆ ಅಂಗಡಿಗಳಿಗೆ ಆಗಮಿಸಿ ದಾನ ಸ್ವೀಕರಿಸಿದರು. ಸ್ವಾಮೀಜಿ ಮನೆ ಬಾಗಿಲಿಗೆ ಬಂದು ದಕ್ಷಿಣೆ ಸ್ವೀಕರಿಸಿದ್ದಕ್ಕೆ ವರ್ತಕರು ಧನ್ಯತಾ ಭಾವ ವ್ಯಕ್ತಪಡಿಸಿದರು.