ಅರ್ಜುನ ಗುರೂಜಿ ಆಶೀರ್ವಾದ ಪಡೆದ ಹ್ಯಾಟ್ರಿಕ್ ಹೀರೋ... ಒಂದು ಗಂಟೆ ಕಾಲ ಚರ್ಚಿಸಿದ ಶಿವಣ್ಣ - Shiva Rajkumar in mysuru
ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಕುಟುಂಬ ಸಮೇತರಾಗಿ ಅವಧೂತ ಗುರೂಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ನಗರದ ಸೋನಾರ್ ಬೀದಿಯಲ್ಲಿರುವ ಅರ್ಜುನ ಅವಧೂತ ಗುರೂಜಿಯವರ ಸ್ವಗೃಹಕ್ಕೆ ಭೇಟಿ ನೀಡಿದ್ದರು. ಸುಮಾರು ಒಂದು ಗಂಟೆ ಕಾಲ ಗುರೂಜಿಯವರ ಸ್ವಗೃಹದಲ್ಲಿದ್ದ ಶಿವಣ್ಣ ಬಳಿಕ ಬೆಂಗಳೂರಿಗೆ ತೆರಳಿದರು.