ಕರ್ನಾಟಕ

karnataka

ETV Bharat / videos

ಹುಬ್ಬಳ್ಳಿ-ಧಾರವಾಡದಲ್ಲಿ ಮಳೆ ಆರ್ಭಟ: ಶಿರಸಿಯಲ್ಲಿ ಕೊಚ್ಚಿ ಹೋಯ್ತು ಸೇತುವೆ! - Sirsi bridge collapse

By

Published : Oct 21, 2019, 1:19 PM IST

ಶಿರಸಿ: ಹುಬ್ಬಳ್ಳಿ-ಧಾರವಾಡದಲ್ಲಿ ಅಧಿಕ ಮಳೆ ಸುರಿದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಯಲ್ಲಾಪುರ-ಮುಂಡಗೋಡು ಮಾರ್ಗದ ಸಿಡಿಲಗುಂಡಿ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಮೇಲೆ ನೀರು ಹರಿದು ಕೊಚ್ಚಿ ಹೋಗಿದೆ. ಸೇತುವೆ ಕೊಚ್ಚಿ ಹೋದ ಪರಿಣಾಮ ಮುಂಡಗೋಡು, ಯಲ್ಲಾಪುರ, ಸಿಡ್ಲಗುಂಡಿ ಸಂಚಾರ ಬಂದ್ ಆಗಿದೆ. ಈ ಹಿಂದೆ ಅಧಿಕ ಮಳೆಯಿಂದ ಸಿಡ್ಲಗುಂಡಿ ಹೊಳೆ ಸೇತುವೆ ಕೊಚ್ಚಿ ಹೋಗಿದ್ದು, ತಾತ್ಕಾಲಿಕವಾಗಿ ಸರಿಪಡಿಸಲಾಗಿತ್ತು. ಆದರೆ ನಿನ್ನೆಯಿಂದ ಅಧಿಕ ಮಳೆ ಹಿನ್ನೆಲೆಯಲ್ಲಿ ಬೇಡ್ತಿ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ತಾತ್ಕಾಲಿಕ ಸೇತುವೆ ಸಹ ಕೊಚ್ಚಿಹೋಗಿ, ಸಂಚಾರ ಅಸ್ತವ್ಯಸ್ತವಾಗಿದೆ.

ABOUT THE AUTHOR

...view details