ಕರ್ನಾಟಕ

karnataka

By

Published : Sep 8, 2019, 1:52 AM IST

Updated : Sep 8, 2019, 8:01 AM IST

ETV Bharat / videos

ಶಿರಹಟ್ಟಿ ಶಾಸಕ ರಾಮಣ್ಣರ ಕಬಡ್ಡಿ ಕ್ರೇಜ್​... ರೈಡ್​ಗೆ ಹೋಗಿ ಮುಗ್ಗರಿಸಿ ಬಿದ್ದ ಎಂಎಲ್​ಎ

ಗದಗ: ಶಿರಹಟ್ಟಿ‌ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಕ್ರಿಡಾಸಕ್ತಿ ಪ್ರದರ್ಶಿಸಲು ಹೋಗಿ ಮಣ್ಣು ಮುಕ್ಕಿದ್ದಾರೆ. ಕ್ರೀಡೆಯಲ್ಲಿ ಸ್ಪರ್ಧಾಳುಗಳಿಗೆ‌ ಸ್ಪೂರ್ತಿ ತುಂಬಲಿಕ್ಕೆ ಹೋದ್ರೋ, ಅಥವಾ ತಾವೇ ತೊಡೆ ತಟ್ಟೋ ಮೂಲಕ ಸ್ಪೂರ್ತಿ ಪಡೆಯೋಕೆ ಹೋದ್ರೋ ಗೊತ್ತಿಲ್ಲ. ಕಬಡ್ಡಿ, ಕಬಡ್ಡಿ ಅನ್ನುತ್ತ ಫೀಲ್ಡ್​ಲ್ಲಿದ್ದವರ ಮೇಲೆ ನುಗ್ಗಲು ಹೋಗಿ ತಾವೇ ಮುಗ್ಗರಿಸಿ ಬಿದ್ದಿದ್ದಾರೆ. ಶಿರಹಟ್ಟಿ ತಾಲೂಕಿನ ಹಡಗಲಿ ಗ್ರಾಮದ ವೀರಭದ್ರೇಶ್ವರ ಜಾತ್ರೆ ನಿಮಿತ್ತ ನಡೆದ ಕ್ರೀಡಾಕೂಟ ಉದ್ಘಾಟಿಸಿದ ನಂತರ ತಾವೂ ಒಂದು ಕೈ ನೋಡೇ ಬಿಡೋಣ ಅಂತಾ ಅಖಾಡಕ್ಕಿಳಿದಾಗ ಈ ಅವಘಡ ಸಂಭವಿಸಿದೆ. ಶಾಸಕ ಆಟ ಆಡೋಕೆ ಹೋಗಿ ಮುಗ್ಗರಿಸಿ ಬಿದ್ದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಕೆಲವರು ಈ ವಯಸ್ಸಿನಲ್ಲಿ ಯಾಕಪ್ಪಾ ಬೇಕು ಇವರಿಗೆ ಇದೆಲ್ಲಾ ಅಂದ್ರೆ, ಇನ್ನೂ ಕೆಲವರು ಈ ವಯಸ್ಸಿನಲ್ಲೂ ಅವರ ಕ್ರೀಡಾ ಸ್ಪೂರ್ತಿ ಮೆಚ್ಚಲೇಬೇಕು ಎನ್ನುತ್ತಿದ್ದಾರೆ.
Last Updated : Sep 8, 2019, 8:01 AM IST

ABOUT THE AUTHOR

...view details