ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ: 'ಕಮಲ'ದಲ್ಲಿ ಅಸಮಾಧಾನದ ಬೇಗುದಿ - Excise Minister H. Nagesh dropped today from the Cabinet
ಬೆಂಗಳೂರು: ಬರೋಬ್ಬರಿ 14 ತಿಂಗಳ ನಂತರ ಹಗ್ಗಜಗ್ಗಾಟದ ನಡುವೆ ರಾಜ್ಯದ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ನಡೆದಿದೆ. ಏಳು ಶಾಸಕರು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಂಪುಟ ಸೇರಿ ಮಂತ್ರಿಪಟ್ಟ ಅಲಂಕರಿಸಿದರು. ಆದರೆ, ಇಷ್ಟು ದಿನ ಮಂತ್ರಿ ಪಟ್ಟ ದೊರೆಯುತ್ತದೆಂಬ ಮಹಾದಾಸೆಯಲ್ಲಿದ್ದ 12ಕ್ಕೂ ಅಧಿಕ ಶಾಸಕರ ಅಸಮಾಧಾನದ ಸ್ಫೋಟ ಭುಗಿಲೆದ್ದಿದೆ. ಯೋಗೇಶ್ವರ್ಗೆ ಮಂತ್ರಿ ಸ್ಥಾನ ಕೊಟ್ಟಿದ್ಯಾಕೆ ಎಂದು ಹೆಚ್.ವಿಶ್ವನಾಥ್ ಗುಡುಗಿದರೆ, ಹಿರಿಯರಿಗೆ ಬೆಲೆನೇ ಇಲ್ವಾ ಎಂದು ತಿಪ್ಪಾರೆಡ್ಡಿ ಕಿಡಿಕಾರಿದ್ದಾರೆ. ಹಾಗೆಯೇ ಎಂ.ಪಿ.ರೇಣುಕಾಚಾರ್ಯ, ಮಹೇಶ್ ಕುಮಟಳ್ಳಿ ಸೇರಿದಂತೆ ಹಲವರು ಕೆಂಡಾಮಂಡಲರಾಗಿದ್ದಾರೆ.
Last Updated : Jan 13, 2021, 11:01 PM IST