ಕಲಬುರಗಿಯಲ್ಲಿ ರೈತರಿಂದ ಬಿರುಸಿನ ಬಿತ್ತನೆ ಕಾರ್ಯ - ಮುಂಗಾರು ಬೆಳೆಗಳ ಬಿತ್ತನೆ ಲೇಟೆಸ್ಟ್ ನ್ಯೂಸ್
ಭೂ ತಾಯಿಗೆ ಮುಂಗಾರಿನ ಅಭಿಷೇಕವಾಗುತ್ತಿದ್ದಂತೆ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಸಕಾಲಕ್ಕೆ ಮಳೆ ಇಲ್ಲದೆ ಬೆಳೆ ಬೆಳೆಯಲಾಗದೆ ಸತತ ನಷ್ಟ ಅನುಭವಿಸಿರುವ ಕಲಬುರಗಿ ಜಿಲ್ಲೆಯ ರೈತರು, ಈ ವರ್ಷ ಸಮೃದ್ಧ ಮಳೆಯ ನಿರೀಕ್ಷೆಯಲ್ಲಿದ್ದರು. ಇದೀಗ ಸಮರ್ಪಕ ಮುಂಗಾರು ಮಳೆ ಸುರಿದಿದ್ದು, ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ರೈತ ಸಂಪರ್ಕ ಕೇಂದ್ರಗಳಿಂದ ರೈತರು ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ತೆಗೆದುಕೊಂಡು ಹೋಗಿ ಶೇಖರಣೆ ಮಾಡಿಕೊಂಡಿದ್ದಾರೆ.