ದೊಡ್ಡಬಳ್ಳಾಪುರದಲ್ಲಿ ಭಾರಿ ಮಳೆಗೆ ಕೊಚ್ಚಿಹೋಯ್ತು ಬಂಡಿಹಳ್ಳ ರಸ್ತೆ, ಘಾಟಿ ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಕಡಿತ! - ಘಾಟಿ ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಕಡಿತ
ದೊಡ್ಡಬಳ್ಳಾಪುರ ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ಎಡೆಬಿಡದೆ ಸುರಿದ ಮಳೆಗೆ ಅನೇಕ ಕೆರೆ-ಕುಂಟೆಗಳು ತುಂಬಿವೆ. ಗೌರಿಬಿದನೂರಿನ ಸುಪ್ರಸಿದ್ಧ ಘಾಟಿ ಪುಣ್ಯಕ್ಷೇತ್ರ ಮಾರ್ಗದ ಬಂಡಿಹಳ್ಳ ಬಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಹಿಂದೂಪುರ, ಗೌರಿಬಿದನೂರು ಕಡೆಯಿಂದ ಬರುವ ಭಕ್ತಾದಿಗಳಿಗೆ ತೀವ್ರ ತೊಂದರೆಯಾಗಿದೆ.